CrimeNational

ಕಲ್ಲು ಕ್ವಾರಿಯಲ್ಲಿ ದುರಂತ; ಎಂಟು ಕಾರ್ಮಿಕರ ದುರ್ಮರಣ

ಐಜ್ವಾಲ್; ಮಿಜೋರಾಮ್‌ನ ಕಲ್ಲು ಕ್ವಾರಿಯಲ್ಲಿ ಕಲ್ಲು ಕುಸಿದು ಬಿಹಾರ ಮೂಲಕ ಎಂಟು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ನಡೆದಿದೆ. ನಿನ್ನೆ ಸಂಜೆ ಈ ದರ್ಘಟನೆ ನಡೆದಿದ್ದು, ಇದುವರೆಗೆ ಎಂಟು ಮೃತದೇಹಗಳನ್ನು ಹೊರತೆಗೆಯಲಾಗಿದೆ. ಒಟ್ಟು 12 ಕಾರ್ಮಿಕರು ಸಿಲುಕಿದ್ದರು. ಉಳಿದ ನಾಲ್ವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. 

ಹ್ನಾಥಿಯಾಲ್ ಜಿಲ್ಲೆ ಮೌದರ್ಹ್‌ನ ಖಾಸಗಿ ಕಂಪನಿ ಕಾರ್ಮಿಕರು ಊಟ ಮಾಡಿದ ನಂತರ ಕೆಲಸ ಶುರು ಮಾಡಿದ್ದರು. ಈ ವೇಳೆ ಈ ದುರಂತ ಸಂಭವಿಸಿದೆ. 5 ಹಿಟಾಚಿ ಯಂತ್ರಗಳು ಮತ್ತು ಡ್ರಿಲ್ಲಿಂಗ್ ಯಂತ್ರಗಳು ಕೂಡಾ ಅವಶೇಷಗಳಡಿ ಸಿಲುಕಿದ್ದು, ಬಹುತೇಕ ಎಲ್ಲವೂ ಸಂಪೂರ್ಣ ಹಾಳಾಗಿವೆ ಎಂದು ತಿಳಿದುಬಂದಿದೆ.

ಕಲ್ಲು ಕ್ವಾರಿ ಬಳಿಯ  ಲೀಟೆ ಮತ್ತು ನಾತಿಯಾಲ್ ಗ್ರಾಮಗಳ ಜನರು ಕೂಡಾ ಕಾರ್ಯಾಚರಣೆಗೆ ಸಾಥ್‌ ನೀಡಿದ್ದಾರೆ. ರಾಜ್ಯ ವಿಪತ್ತು ನಿರ್ವಹಣಾ ಪಡೆ, ಗಡಿ ಭದ್ರತಾ ಪಡೆ ಮತ್ತು ಅಸ್ಸಾಂ ರೈಫಲ್ಸ್ ಪಡೆ  ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ.

 

Share Post