CrimeNational

ಇಡಿ ಅಧಿಕಾರಿಗಳೇ ಲಂಚ ಸ್ವೀಕರಿಸುತ್ತಿದ್ದಾಗ ಬಲೆಗೆ ಬಿದ್ದರು..!

ಜೈಪುರ; ಚಿಟ್‌ ಫಂಡ್‌ ಹಗರಣದಲ್ಲಿ ಪ್ರಕರಣ ದಾಖಲಿಸದೇ ಇರೋದಕ್ಕಾಗಿ 17 ಲಕ್ಷ ರೂಪಾಯಿ ಲಂಚ ಕೇಳಿದ ಆರೋಪದ ಮೇಲೆ ಇಬ್ಬರು ಜಾರಿ ನಿರ್ದೇಶನಾಲಯದ ಅಧಿಕಾರಿಗಳನ್ನು ಬಂಧಿಸಲಾಗಿದೆ. ರಾಜಸ್ಥಾನದಲ್ಲಿ ಇಬ್ಬರು ಅಧಿಕಾರಿಗಳು ಲಂಚ ಸ್ವೀಕಾರ ಮಾಡುವಾಗಲೇ ರಾಜಸ್ಥಾನ ಭ್ರಷ್ಟಾಚಾರ ನಿಗ್ರಹ ದಳ ಬಂಧಿಸಿದೆ.

 

ಜಾರಿ ನಿರ್ದೇಶನಾಲಯದ ಅಧಿಕಾರಿ ನೇವಲ್‌ ಕಿಶೋರ್‌ ಮೀನಾ ಹಾಗೂ ಅವರ ಸಹವರ್ತಿ ಬಾಬುಲಾಲ್‌ ಮೀನಾ ಅವರನ್ನು ಬಂಧಿಸಲಾಗಿದೆ. ವ್ಯಕ್ತಿಯೊಬ್ಬರಿಗೆ ನಿಮ್ಮ ವಿರುದ್ಧ ಚಿಟ್‌ ಫಂಡ್‌  ಹಗರಣದಲ್ಲಿ ಕೇಸ್‌ ದಾಖಲಿಸುತ್ತಿದ್ದೇವೆ. ಕೇಸ್‌ ದಾಖಲು ಮಾಡದೇ ಇರಬೇಕು ಅಂದ್ರೆ ಲಂಚ ಕೊಡಬೇಕು ಎಂದು ಕೇಳಿದ್ದರು. ಒಟ್ಟು 17 ಲಕ್ಷ ರೂಪಾಯಿ ಲಂಚ ಕೇಳಲಾಗಿತ್ತು ಎಂದು ತಿಳಿದುಬಂದಿದೆ.

 

Share Post