CrimeDistricts

ತಾಯಿಯ ಸಾವಿನಿಂದ ಖಿನ್ನತೆ; ರೈಲಿಗೆ ತಲೆಕೊಟ್ಟು ಅಣ್ಣ-ತಂಗಿ ಆತ್ಮಹತ್ಯೆ!

ಚಿಕ್ಕಬಳ್ಳಾಪುರ; ತಾಯಿಯ ಸಾವಿನಿಂದ ಮಾನಸಿಕವಾಗಿ ನೊಂದಿದ್ದ ಅಣ್ಣ-ತಂಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ.. ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ನಗರದಲ್ಲಿ ಈ ದುರ್ಘಟನೆ ನಡೆದಿದೆ.. ಅಣ್ಣ-ತಂಗಿ ಇಬ್ಬರೂ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ..

ಇದನ್ನೂ ಓದಿ; ಮೈಸೂರಿಗೆ ಬಿಜೆಪಿ ಪಾದಯಾತ್ರೆ; ಷರತ್ತಿಗೆ ಒಪ್ಪಿದರೆ ಮಾತ್ರ ಜೆಡಿಎಸ್‌ ಭಾಗಿ!

ಶಿಡ್ಲಘಟ್ಟದ ಪ್ರೇಮನಗರ ನಿವಾಸಿಗಳಾಗಿರುವ 25 ವರ್ಷದ ಪ್ರಭು ಹಾಗೂ 23 ವರ್ಷದ ನವ್ಯಾ ಆತ್ಮಹತ್ಯೆ ಮಾಡಿಕೊಂಡವರು.. ಇವರ ತಾಯಿ ಇತ್ತೀಚೆಗೆ ತೀರಿಕೊಂಡಿದ್ದರು.. ಇದರಿಂದಾಗಿ ತಾಯಿಯನ್ನು ಮರೆಯಲಾಗದೆ ಇಬ್ಬರೂ ಖಿನ್ನತೆಗೆ ಒಳಗಾಗಿದ್ದರು.. ಇಂದು ಬೆಳಗಿನ ಜಾವ ಇಬ್ಬರೂ ಆತ್ಮಹತ್ಯೆಗೆ ತೀರ್ಮಾನಿಸಿ, ರೈಲಿಗೆ ಒಟ್ಟಿಗೆ ತಲೆಕೊಟ್ಟಿದ್ದಾರೆ..

ಇದನ್ನೂ ಓದಿ; ರಾಜ್ಯಪಾಲರ ನೋಟಿಸ್‌ ವಾಪಸ್‌ ಪಡೆಯುವಂತೆ ಒತ್ತಾಯಿಸಿ ನಿರ್ಣಯ!

ಇಬ್ಬರ ರುಂಡ-ಮುಂಡಗಳು ಬೇರೆ ಬೇರೆಯಾಗಿ ಪತ್ತೆಯಾಗಿವೆ.. ಸ್ಥಳಕ್ಕೆ ಚಿಕ್ಕಬಳ್ಳಾಪುರ ರೈಲ್ವೆ ಹೊರಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು..

Share Post