BengaluruCrime

C‌rime Stories; ಬಾಗಲಕೋಟೆಯಲ್ಲಿ ವಿದ್ಯಾರ್ಥಿನಿ ಮೇಲೆ ಹಲ್ಲೆ; ಕುಣಿಗಲ್‌ನಲ್ಲಿ ಸ್ವಾಮೀಜಿ ಅರೆಸ್ಟ್

ಬೆಂಗಳೂರು; ರಾಜ್ಯದ ವಿವಿಧೆಡೆ ಇಂದು ಹಲವು ಅಹಿತಕರ ಘಟನೆಗಳು ನಡೆದಿವೆ. ಬಾಗಲಕೋಟೆಯಲ್ಲಿ ವಿದ್ಯಾರ್ಥಿನಿಯೊಬ್ಬಳನ್ನು ಚುಡಾಯಿಸಲಾಗಿದೆ. ಇನ್ನೊಂದೆಡೆ ಪೋಕ್ಸೋ ಕಾಯ್ದೆಯಡಿ ಸ್ವಾಮೀಜಿಯೊಬ್ಬರನ್ನು ಬಂಧಿಸಲಾಗಿದೆ. ಬೆಂಗಳೂರಿನಲ್ಲಿ ಕಿರುತೆರೆ ನಟಿಯೊಬ್ಬರು ಅಪಘಾತದ ವಿವಾರವಾಗಿ ಕಿತ್ತಾಡಿಕೊಂಡಿದ್ದಾರೆ.

ಇದನ್ನೂ ಓದಿ; ಲೋಕಸಭಾ ರೇಸ್‌ನಿಂದ ಹಿಂದೆ ಸರಿದ್ರಾ ಯತೀಂದ್ರ ಸಿದ್ದರಾಮಯ್ಯ?; ಕಾರಣ ಏನು ಗೊತ್ತಾ..?

 ವಿದ್ಯಾರ್ಥಿನಿಯನ್ನು ಚುಡಾಯಿಸಿ ಹಲ್ಲೆ;

ವಿದ್ಯಾರ್ಥಿನಿಯನ್ನು ಚುಡಾಯಿಸಿ ಹಲ್ಲೆ; ಬಾಗಲಕೋಟೆಯಲ್ಲಿ ಪುಂಡರ ಗುಂಪೊಂದು ವಿದ್ಯಾರ್ಥನಿಯೊಬ್ಬಳನ್ನು ಚುಡಾಯಿಸಿದ್ದಲ್ಲದೆ ಆಕೆಯ ಮೇಲೆ ಹಲ್ಲೆ ಕೂಡಾ ನಡೆಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ರಬಕವಿ ಬಸ್‌ ನಿಲ್ದಾಣದಲ್ಲಿ ಈ ಕೃತ್ಯ ಎಸಗಲಾಗಿದೆ. ವಿದ್ಯಾರ್ಥಿನಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನು ಘಟನೆ ಸಂಬಂಧ ಪೊಲೀಸರು ಅನ್ವರ್‌ ಮಕಂದರ್‌, ಜಾವೀದ್‌ ಅಲಿಮದ್‌ ಹಾಗೂ ಆಯನ್‌ ಪಟೇಲ್‌ ಎಂಬುವವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಮೂವರೂ ಬುಧವಾರ ಬಸ್‌ ನಿಲ್ದಾಣಕ್ಕೆ ಹೋಗುತ್ತಿದ್ದ ವಿದ್ಯಾರ್ಥಿನಿಯ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ನಂತರ ಫೋನ್‌ ನಂಬರ್‌ ಕೇಳಿದ್ದಾರೆ. ನಂಬರ್‌ ಕೊಡದಿದ್ದಕ್ಕೆ ಹಲ್ಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ವಿನಾಕಾರಣ ಯುವಕರು ವಿದ್ಯಾರ್ಥಿನಿ ಜೊತೆ ಜಗಳ ಮಾಡಿದ್ದಾರೆ. ಆಕೆಯನ್ನು ಚುಡಾಯಿಸಿದ್ದಾರೆ. ಜೊತೆಗೆ ಆಕೆಯ ಫೋಟೋವನ್ನು ಕೂಡಾ ತೆಗೆದಿದ್ದಾರೆ. ಅಷ್ಟಕ್ಕೂ ಸುಮ್ಮನಾಗದೇ ಫೋನ್‌ ನಂಬರ್‌ ಕೊಡುವಂತೆ ಪೀಡಿಸಿದ್ದಾರೆ. ನಂಬರ್‌ ಕೊಡದಿದ್ದಕ್ಕೆ ವಿದ್ಯಾರ್ಥಿನಿ ಮೇಲೆ ಹಲ್ಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ; ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ; ಇಬ್ಬರನ್ನು ವಶಕ್ಕೆ ಪಡೆದ ಎನ್‌ಐಎ ತಂಡ

ಆಕ್ಸಿಡೆಂಟ್‌ ಮಾಡಿ ಯುವತಿ ಮೇಲೆ ಹಲ್ಲೆ!;

ಆಕ್ಸಿಡೆಂಟ್‌ ಮಾಡಿ ಯುವತಿ ಮೇಲೆ ಹಲ್ಲೆ!; ಇನ್ನು ಬೆಂಗಳೂರಿನಲ್ಲಿ ಕಿರುತೆರೆ ನಟಿಯೊಬ್ಬರು ರಸ್ತೆಯಲ್ಲಿ ಯುವತಿಯೊಬ್ಬರ ಜೊತೆ ಕಿತ್ತಾಡಿಕೊಂಡಿದ್ದಾರೆ. ಕನ್ನಡದ ಕಿರುತೆರೆ ನಟಿ ಲಕ್ಷ್ಮಿ ಸಿದ್ದಯ್ಯ  ಅವರು ಆಕ್ಸಿಡೆಂಟ್‌ ಮಾಡಿದ್ದು, ನಂತರ ಯುವತಿಯ  ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮಾಧುರಿ ಎಂಬುವವರು ತಮ್ಮ ಸೋದರಿ ಐಶ್ವರ್ಯಾ ಜೊತೆ ತಮ್ಮ ಯಮಹಾ ಫೆಸಿನೋ ತೆರಳುತ್ತಿದ್ದರು. ಈ ವೇಳೆ  I20 ಕಾರಿನಲ್ಲಿದ್ದ ಕಿರುತೆರೆ ನಟಿ ಲಕ್ಷ್ಮಿ ಸಿದ್ದಯ್ಯ ಹಾಗೂ ಸಹಚರರು ಮಾಧುರಿ ಅವರ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಅಪಘಾತ ಮಾಡಿದ್ದಲ್ಲದೆ ಕಿರಿಕ್‌ ಮಾಡಿ ಹಲ್ಲೆ ಮಾಡಿದ್ದಾರೆಂದು ಆರೋಪಿ ಜ್ಞಾನ ಭಾರತಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ; ಲೋಕಸಭಾ ರೇಸ್‌ನಿಂದ ಹಿಂದೆ ಸರಿದ್ರಾ ಯತೀಂದ್ರ ಸಿದ್ದರಾಮಯ್ಯ?; ಕಾರಣ ಏನು ಗೊತ್ತಾ..?

ಪೋಕ್ಸೋ ಕಾಯ್ದಯಡಿ ಸ್ವಾಮೀಜಿ ಅರೆಸ್ಟ್‌!;

ಪೋಕ್ಸೋ ಕಾಯ್ದಯಡಿ ಸ್ವಾಮೀಜಿ ಅರೆಸ್ಟ್‌!; ಇನ್ನೊಂದೆಡೆ ತುಮಕೂರು ಜಿಲ್ಲೆಯ ಕುಣಿಗಲ್‌ ಬಳಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಸ್ವಾಮೀಜಿಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.  ಪೋಕ್ಸೋ ಪ್ರಕರಣದ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹಂಗರಹಳ್ಳಿ ವಿದ್ಯಾಚೌಡೇಶ್ವರಿ ಮಠದ ಪೀಠಾಧಕ್ಷ ಬಾಲಮಂಜುನಾಥ ಸ್ವಾಮೀಜಿ ಎಂಬುವವರೇ ಬಂಧಿತರು.

ಫೆಬ್ರವರಿ 10 ರಂದು ತುಮಕೂರು ಸೈಬರ್ ಪೊಲೀಸ್ ಠಾಣೆಯಲ್ಲಿ ದೂರೊಂದು ದಾಖಲಿಸಲಾಗಿತ್ತು. ಈಗ ಬಂಧಿತರಾಗಿರುವ ಸ್ವಾಮೀಜಿ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ತನಿಖೆ ಕೈಗೆತ್ತಿಕೊಂಡಿದ್ದ ಪೊಲೀಸರು ನಿನ್ನೆ ತಡರಾತ್ರಿ ಆರೋಪಿತ ಸ್ವಾಮೀಜಿಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿ; ಯತೀಂದ್ರ ಸಿದ್ದರಾಮಯ್ಯಗೆ ಘೇರಾವ್‌; ಗ್ರಾಮಕ್ಕೆ ಬಿಡದೆ ಎಳೆದಾಡಿದ ಜನ!

Share Post