CrimePolitics

ಮೈಸೂರಿನಲ್ಲಿ ಕಾಂಗ್ರೆಸ್‌ ಮುಖಂಡೆ ಬರ್ಬರ ಹತ್ಯೆ; ಗಂಡನೇ ಕೊಲೆ ಮಾಡಿದನಾ..?

ಮೈಸೂರು; ಇತ್ತೀಚೆಗೆ ಕಾಂಗ್ರೆಸ್‌ ಪಕ್ಷದಲ್ಲಿ ಹೆಚ್ಚು ಸಕ್ರಿಯರಾಗಿದ್ದ ಮೈಸೂರಿನ ಕಾಂಗ್ರೆಸ್‌ ಮುಖಂಡೆ ವಿದ್ಯಾ ನಂದೀಶ್‌ ಭೀಕರವಾಗಿ ಕೊಲೆಯಾಗಿದ್ದಾರೆ.. ತಿ.ನರಸೀಪುರ ತಾಲ್ಲೂಕಿನ ಬನ್ನೂರು ಸಮೀಪದ ತುರಗನೂರಿನ ನಿವಾಸದಲ್ಲೇ ವಿದ್ಯಾ ನಂದೀಶ್‌ ಅವರನ್ನು ಭಿಕರವಾಗಿ ಕೊಲೆ ಮಾಡಲಾಗಿದೆ.. ಕಳೆದ ರಾತ್ರಿ ಕೊಲೆ ನಡೆದಿದ್ದು, ಇಂದು ಬೆಳಗ್ಗೆ ಈ ಘಟನೆ ಬೆಳಕಿಗೆ ಬಂದಿದೆ ಎಂದು ತಿಳಿದುಬಂದಿದೆ.. ರಕ್ತದ ಮಡುವಿನಲ್ಲಿ ಬಿದ್ದಿದ್ದ ವಿದ್ಯಾ ನಂದೀಶ್‌ ಅವರ ಮೃತದೇಹವನ್ನು ನೋಡಿದ ಸ್ಥಳೀರು ಪೊಲೀಸರಿಗೆ ಮಾಹಿತಿ ಕೊಟ್ಟಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ಮಾಡುತ್ತಿದ್ದಾರೆ..
ಮೈಸೂರು ನಗರ ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿಯಾಗಿದ್ದ ವಿದ್ಯಾ ನಂದೀಶ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.. ರಾಜಕೀಯಕ್ಕೆ ಬರುವ ಮೊದಲು ಚಲನಚಿತ್ರಗಳಲ್ಲಿ ಅಭಿನಯಿಸುತ್ತಿದ್ದ ಅವರು, ಕೆಲ ವರ್ಷಗಳಿಂದ ಸಮಾಜಸೇವಕರಾಗಿ, ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದರು.. ಬನ್ನೂರು ಸಮೀಪದ ತುರಗನೂರಿನ ನಂದೀಶ್‌ ಅವರನ್ನು ವಿವಾಹವಾಗಿದ್ದು, ಇವರಿಗೆ ಇಬ್ಬರು ಮಕ್ಕಳು ಕೂಡಾ ಇದ್ದಾರೆ. ಮೈಸೂರಿನ ಶ್ರೀರಾಮಪುರದಲ್ಲಿ ಒಂದು ಮನೆ ಇದ್ದು, ಯಾವಾಗಲೂ ಅಲ್ಲಿಯೇ ಇರುತ್ತಿದ್ದರು.. ವಿದ್ಯಾ ಅವರು ಕಾಂಗ್ರೆಸ್‌ನಲ್ಲಿದ್ದರೂ ಕೆಲ ನಾಯಕರೊಂದಿಗೆ ಆಪ್ತರಾಗಿದ್ದುದು ಕುಟುಂಬದಲ್ಲಿ ವಿರಸಕ್ಕೆ ಕಾರಣವಾಗಿತ್ತು ಎನ್ನಲಾಗ್ತಿದೆ.. ಈ ವಿಚಾರದಲ್ಲಿ ಪತಿ ಹಾಗೂ ಪತ್ನಿ ನಡುವೆ ಜಗಳಗಳೂ ನಡೆದಿದ್ದವುಯ ಎನ್ನಲಾಗಿದೆ..
ಸೋಮವಾರ ರಾತ್ರಿ ಮೈಸೂರಿನಿಂದ ತುರಗನೂರಿಗೆ ವಿದ್ಯಾ ನಂದೀಶ್‌ ಬಂದಿದ್ದರು, ಅಲ್ಲಿಯೇ ಅವರ ಕೊಲೆಯಾಗಿದೆ.. ಗಂಡನೇ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ.. ನಂದೀಶ್‌ ಕೂಡ ನಾಪತ್ತೆಯಾಗಿರುವುದರಿಂದ ಆತನ ಮೇಲೆಯೇ ಪೊಲೀಸರಿಗೆ ಅನುಮಾನ ಹೆಚ್ಚಿದೆ.

Share Post