CrimeDistricts

ಸಿಎಂ ಆಪ್ತ ಎಂದು ಹೇಳಿಕೊಂಡು ಜಿಲ್ಲಾ ಆರೋಗ್ಯಾಧಿಕಾರಿಗೆ 7 ಲಕ್ಷ ರೂಪಾಯಿ ವಂಚನೆ!

ಬಾಗಲಕೋಟೆ; ಇಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಜಯಶ್ರೀ ಅವರಿಗೆ ವ್ಯಕ್ತಿಯೊಬ್ಬ 7 ಲಕ್ಷ ರೂಪಾಯಿ ವಂಚನೆ ಮಾಡಿದ್ದಾನೆ.. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಎಂದು ಪರಿಚಯಿಸಿಕೊಂಡು ಬಂದ ರಾಮಯ್ಯ ಎಂಬ ವ್ಯಕ್ತಿ ಜಯಶ್ರೀ ಅವರಿಂದ ಹಣ ಪಡೆದು ವಂಚಿಸಿದ್ದಾನೆ ಎಂದು ತಿಳಿದುಬಂದಿದೆ..

ಇದನ್ನೂ ಓದಿ; ಮೂತ್ರ ವಿಸರ್ಜನೆ ಮಾಡುವಾಗ ಪ್ರವಹಿಸಿದ ವಿದ್ಯುತ್‌; ಯುವಕ ಸಾವು!

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಬಾಗಲಕೋಟೆ ಜಿಲ್ಲಾಧಿಕಾರಿ ಹುದ್ದೆಗಾಗಿ ಜಯಶ್ರೀ ಹಾಗೂ ಶಾಸಕ ಹೆಚ್‌.ವೈ.ಮೇಟಿ ಅವರ ಅಳಿಯ ರಾಜ್‌ಕುಮಾರ್‌ ನಡುವೆ ಕಿತ್ತಾಟ ನಡೆದಿತ್ತು.. ಹೀಗಾಗಿ ಈ ವಿಚಾರವಾಗಿ ಮಾತನಾಡಲು ಜಯಶ್ರೀ ಅವರು ವಿಧಾನಸೌಧಕ್ಕೆ ಬಂದಿದ್ದರು.. ಈ ವೇಳೆ ರಾಮಯ್ಯ ಎಂಬಾತ ಪರಿಚಯವಾಗಿದ್ದು, ಸಿಎಂ ಸಿದ್ದರಾಮಯ್ಯ ಆಪ್ತ ಎಂದು ಹೇಳಿಕೊಂಡಿದ್ದಾನೆ.. ತಾವು ಕೆಎಎಸ್‌ ಅಧಿಕಾರಿ ಎಂದು ಸುಳ್ಳು ಹೇಳಿದ್ದರಿಂದ ಜಯಶ್ರೀ ಸಮಸ್ಯೆಯ ಬಗ್ಗೆ ಹೇಳಿಕೊಂಡಿದ್ದಾರೆ.. ಈ ವೇಳೆ ರಾಮಯ್ಯ ನಾನು ಸಮಸ್ಯೆ ಬಗೆಹರಿಸುತ್ತೇನೆ ಎಂದು ಹೇಳಿ 50 ಸಾವಿರ ರೂಪಾಯಿ ಪಡೆದುಕೊಂಡಿದ್ದಾನೆ..

ಇದನ್ನೂ ಓದಿ; ಗಂಡ ಕಪ್ಪಾಗಿದ್ದಾನೆ ಎಂದು ಪ್ರಿಯಕರನ ಜೊತೆ ಎಸ್ಕೇಪ್‌; ಒಂದು ತಿಂಗಳ ಮಗು ಅನಾಥ!

ಅನಂತರ ಹಂತ ಹಂತವಗಿ ಏಳು ಲಕ್ಷ ರೂಪಾಯಿ ಪಡೆದು ವಂಚನೆ ಮಾಡಿದ್ದಾನೆ ಎಂದು ಜಯಶ್ರೀ ಆರೋಪ ಮಾಡಿದ್ದಾರೆ.. ಈ ಬಗ್ಗೆ ಜಯಶ್ರೀ ಅವರು ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದಾರೆ..

Share Post