CrimeDistricts

ಕ್ಯಾಂಟರ್‌ ವಾಹನ ಪಲ್ಟಿ; ಮೂವರ ದಾರುಣ ಸಾವು!

ಚಿಕ್ಕಬಳ್ಳಾಪುರ; ಚಿಕ್ಕಬಳ್ಳಾಪುರ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ… ಬೆಣಚು ಕಲ್ಲುಗಳನ್ನು ಸಾಗಿಸುತ್ತಿದ್ದ ಕ್ಯಾಂಟರ್‌ ವಾಹನ ಪಲ್ಟಿ ಹೊಡೆದಿದ್ದು, ಘಟನೆಯಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.. ಇಬ್ಬರ ಸ್ಥಿತಿ ಗಂಭೀರವಾಗಿದೆ..

ಕೋಲಾರ ಮಾಲೂರು ತಾಲ್ಲೂಕಿನ ಚಿಕ್ಕತಿರುಪತಿಯಿಂದ ಬೆಣಚು ಕಲ್ಲುಗಳನ್ನುಮಂಚೇನಹಳ್ಳಿಗೆ ಸಾಗಿಸಲಾಗುತ್ತಿತ್ತು.. ಚಿಕ್ಕಬಳ್ಳಾಪುರದಿಂದ ಮಂಚೇನಹಳ್ಳಿಗೆ ಹೋಗುವ ಮಾರ್ಗದಲ್ಲಿ ಕ್ಯಾಂಟರ್‌ ಪಲ್ಟಿಯಾಗಿ ಈ ದುರ್ಘಟನೆ ನಡೆದಿದೆ.. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಇಬ್ಬರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ..

ಕ್ಯಾಂಟರ್‌ನಲ್ಲಿ ಬೆಣಚು ಕಲ್ಲುಗಳ ಮೇಲೆ ಕಾರ್ಮಿಕರು ಕುಳಿತಿದ್ದರು.. ಕ್ಯಾಂಟರ್‌ ಪಲ್ಟಿಯಾಗಿದ್ದರಿಂದ ಕಲ್ಲುಗಳು ಅವರ ಮೇಲೆ ಬಿದ್ದು ಮೂವರು ಸಾವನ್ನಪ್ಪಿದ್ದಾರೆ.. ಅಂಬುಲೆನ್ಸ್‌ ಬೇಗ ಬಂದಿದ್ದರೆ ಜೀವಗಳನ್ನು ಉಳಿಸಬಹುದಿತ್ತು ಎಂದು ಸ್ಥಳೀಯರು ಹೇಳುತ್ತಿದ್ದಾರೆ..

 

Share Post