CrimeDistricts

ರೇಣುಕಾಚಾರ್ಯ ಸಹೋದರನ ಪುತ್ರನ ಕಿಡ್ನ್ಯಾಪ್‌ ಖಚಿತ; ಕಣ್ಣೀರಿಟ್ಟ ಹೊನ್ನಾಳಿ ಶಾಸಕ

ದಾವಣಗೆರೆ; ಹೊನ್ನಾಳಿ ಶಾಸಕ ರೇಣುಕಾಚಾರ್ಯ ಸಹೋದರ ಎಂ.ಪಿ.ರಮೇಶ್‌ ಅವರ ಪುತ್ರ ಚಂದ್ರಶೇಖರ್‌ ಅವರನ್ನು ಕಿಡ್ನ್ಯಾಪ್‌ ಮಾಡಿರುವುದು ಖಚಿತವಾಗಿದೆ ಎಂದು ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ಚಂದ್ರಶೇಖರ್‌ ನಾಪತ್ತೆಯಾಗಿ ಐದು ದಿನ ಕಳೆದಿದೆ. ಅವರನ್ನು ಅಪಹರಿಸುವ ಬಗ್ಗೆ ಪೂರಕ ಮಾಹಿತಿ ನನಗೆ ಸಿಕ್ಕಿದೆ ಎಂದು ಅವರು ಹೇಳಿದ್ದಾರೆ.

ಉದ್ದೇಶಪೂರ್ವಕವಾಗಿ ಚಂದ್ರಶೇಖರ್​​ನನ್ನು ಅಪಹರಣ ಮಾಡಲಾಗಿದೆ. ಆದ್ರೆ ಆತನನ್ನು ಎಲ್ಲಿಟ್ಟಿದ್ದಾರೆ ಎಂಬುದರ ಬಗ್ಗೆ ಇನ್ನೂ ಮಾಹಿತಿ ಇಲ್ಲ ಎಂದು ರೇಣುಕಾಚಾರ್ಯ ಹೇಳಿದ್ದಾರೆ.

 

Share Post