CrimeDistricts

ವಿಜಯಪುರದಲ್ಲಿ ಬಸ್‌ ಡಿಕ್ಕಿ; ವ್ಯಕ್ತಿ ಸ್ಥಳದಲ್ಲೇ ದುರ್ಮರಣ!

ವಿಜಯಪುರ; ವ್ಯಕ್ತಿಯೊಬ್ಬನ ಮೇಲೆ ಬಸ್‌ ಹರಿದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.. ವಿಜಯಪುರ ನಗರದ ಬಸವೇಶ್ವರ ವೃತ್ತದ ಬಳಿ ಈ ದುರ್ಘಟನೆ ನಡೆದಿದೆ.. ಬೆಳ್ಳಂಬೆಳಗ್ಗೆಯೇ ಈ ದುರ್ಘಟನೆ ನಡೆದಿದೆ..

58 ವರ್ಷದ ಅಶೋಕ್‌ ಪರ್ಜೇನವರ್‌ ಎಂಬುವವರೇ ಸಾವನ್ನಪ್ಪಿದ ದುರ್ದೈವಿಯಾಗಿದ್ದಾರೆ.. ಖಾಸಗಿ ಬಸ್‌ ಒಂದು ಅಶೋಕ್‌ ಮೇಲೆ ಹರಿದಿದ್ದು, ತೀವ್ರ ರಕ್ತಸ್ರಾವದಿಂದ ಅಶೋಕ್‌ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.. ಖಾಸಗಿ ಬೆಂಗಳೂರಿನಿಂದ ವಿಜಯಪುರಕ್ಕೆ ಬರುತ್ತಿತ್ತು.. ಅತಿವೇಗವಾಗಿ ಬರುತ್ತಿದ್ದ ಬಸ್‌ಗೆ ಅಶೋಕ್‌ ಸಿಲುಕಿದ್ದಾನೆ..

ಅಶೋಕ್‌ ಪರ್ಜೇನವರ್‌ ಅವರು ರಸ್ತೆ ದಾಟುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಬಸ್‌ ಡಿಕ್ಕಿ ಹೊಡೆದಿದೆ.. ವಿಜಯಪುರ ಸಂಚಾರಿ ಪೊಲೀಸದದ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ..

 

Share Post