CrimeNational

ಟ್ರ್ಯಾಕ್ಟರ್‌ನಿಂದ ಗುದ್ದಿಸಿ ಮಹಿಳೆಯ ದಾರುಣ ಹತ್ಯೆ!; ಅಡ್ಡ ಬಂದವನಿಗೆ ಮಚ್ಚಿನಿಂದ ಹಲ್ಲೆ!

ಆಂಧ್ರಪ್ರದೇಶ; ಆಂಧ್ರಪ್ರದೇಶದ ರಾಯಲಸೀಮೆಗೆ ರಕ್ತಸಿಕ್ತ ಇತಿಹಾಸ.. ಇತ್ತೀಚೆಗೆ ಅಪರಾಧ ಪ್ರಕರಣಗಳು ಕಡಿಮೆಯಾಗಿದ್ದರೂ, ಸಣ್ಣ ಪುಟ್ಟ ವಿಚಾರಗಳಿಗೆ ಆಗಾಗ ಕೊಲೆಗಳು ನಡೆಯುತ್ತಲೇ ಇವೆ.. ಆಲಗಡ್ಡ ಎಂಬಲ್ಲಿ ಮೊನ್ನೆ ಶ್ರೀದೇವಿ ಎಂಬುವವರನ್ನು ಭೀಕರವಾಗಿ ಕೊಲೆ ಮಾಡಲಾಗಿತ್ತು.. ಇದೀಗ ರಾಯಲಸೀಮೆ ಭಾಗದ ಆದೋನಿಯಲ್ಲಿ ಗುಂಡಮ್ಮ ಎಂಬಾಕೆಯನ್ನು ದಾರುಣವಾಗಿ ಕೊಲೆ ಮಾಡಲಾಗಿದೆ.. ಜಮೀನು ವಿವಾದದ ಹಿನ್ನೆಲೆಯಲ್ಲಿ ಈ ಕೊಲೆ ಮಾಡಲಾಗಿದೆ..

ಇದನ್ನೂ ಓದಿ; ನೆಲದ ಮೇಲೆ ಕೂತು ತಿನ್ನುವುದೇ ಒಂದು ಯೋಗಾಸನ!; ಹೀಗೆ ತಿಂದರೆ ಈ ಕಾಯಿಲೆಗಳೆಲ್ಲಾ ಮಾಯ!

ಹೊಲದಲ್ಲಿ ಟ್ರ್ಯಾಕ್ಟರ್‌ನಿಂದ ಉಳುಮೆ ಮಾಡುವಾಗ ದಾಳಿ ನಡೆದಿದ್ದು, ಈ ವೇಳೆ ಮಚ್ಚು, ಲಾಂಗ್‌ಗಳಿಂದ ದಾಳಿ ಮಾಡಲಾಗಿದೆ.. ಕರ್ನೂಲ್ ಜಿಲ್ಲೆಯ ಆದೋನಿ ಮಂಡಲದ ನಾಗನಾಥನ ಹಳ್ಳಿ ಗ್ರಾಮದಲ್ಲಿ ಈ ದುಷ್ಕೃತ್ಯ ನಡೆದಿದೆ. ಗುಂಡಮ್ಮ ಎಂಬ ಮಹಿಳೆ ಮೇಲೆ ಟ್ರ್ಯಾಕ್ಟರ್‌ ಹತ್ತಿಸಿ ಕೊಲೆ ಮಾಡಲಾಗಿದೆ.. ಇದೇ ವೇಳೆ ಆಕೆಯನ್ನು ರಕ್ಷಿಸಲು ಬಂದ ಪುರುಷೋತ್ತಮ ರೆಡ್ಡಿ ಎಂಬಾತನ ಮೇಲೆ ಲಾಂಗ್‌, ಮಚ್ಚುಗಳಿಂದ ತೀವ್ರ ಹಲ್ಲೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ..

ಇದನ್ನೂ ಓದಿ; ಸ್ವಂತ ಮಗಳ ಖಾಸಗಿ ವಿಡಿಯೋ ವೈರಲ್‌ ಮಾಡಿದ ತಂದೆ!; ಫಿನಾಯಿಲ್‌ ಕುಡಿದ ತಾಯಿ!

ಘಟನೆಯಲ್ಲಿ ಗುಂಡಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದು, ಪುರುಷೋತ್ತಮ ರೆಡ್ಡಿ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದಾರೆ.. ಆತನನ್ನು ಆದೋನಿಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕರ್ನೂಲ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ..

Share Post