BengaluruCrime

ಸಂಪ್‌ಗೆ ಬಿದ್ದು ಬಾಲಕ ಸಾವು; ಮಕ್ಕಳನ್ನು ಮನೆಯಲ್ಲಿ ಬಿಟ್ಟು ಹೋಗದಿರಿ ಹುಷಾರ್‌!

ಬೆಂಗಳೂರು; ಬೆಂಗಳೂರನಲ್ಲಿ ತುಂಬಾ ಮನೆಗಳಲ್ಲಿ ಗಂಡ-ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗುತ್ತಾರೆ..  ಈ ವೇಳೆ ಮಕ್ಕಳನ್ನು ಮನೆಯಲ್ಲೇ ಬಿಟ್ಟುಹೋಗುತ್ತಾರೆ.. ಹೀಗೆ ಮಾಡುವುದರಿಂದ ಹಲವಅರು ಅನಾಹುತಗಳಾಗುತ್ತಿವೆ.. ಮಕ್ಕಳನ್ನೇ ಕಳೆದುಕೊಳ್ಳುವ ಅಪಾಯವಿದೆ.. ಮಕ್ಕಳ ಮನೆಯಲ್ಲಿ ಬಿಟ್ಟು ಹೋಗುವ ಮೊದಲು ಪೋಷಕರು ಒಮ್ಮೆ ಯೋಚನೆ ಮಾಡುವುದು ಒಳ್ಳೆಯದು.. ಇದೇ ರೀತಿ ಪೋಷಕರು 5 ವರ್ಷದ ಬಾಲಕನನ್ನು ಮನೆಯಲ್ಲಿ ಬಿಟ್ಟು ಹೋಗಿದ್ದರು.. ಈ ವೇಳೆ ಆ ಬಾಲಕ ನೀರಿನ ಸಂಪ್‌ಗೆ ಬಿದ್ದು ಸಾವನ್ನಪ್ಪಿದ್ದಾನೆ..

ಕೆಆರ್‌ ಪುರಂ ಪೊಲೀಸ್‌ ಠಾಣಾ ವ್ಯಾಪ್ತಿಯ ಅಯ್ಯಪ್ಪ ನಗರದ ವಿಶಾಲ್‌ ಮಾರ್ಟ್‌ ಮುಂಭಾಗದಲ್ಲಿ ಈ ಘಟನೆ ನಡೆದಿದೆ.. ಐದು ವರ್ಷ ಬಾಲಕ ಸುಬೀನ್‌ ಎಂಬಾತ ಸಾವನ್ನಪ್ಪಿದ್ದಾನೆ.. ನೇಪಾಳ ಮೂಲದ ಈ ಕುಟುಂಬ ಕೆಲಸ ಅರಸಿ ಬೆಂಗಳೂರಿಗೆ ಬಂದಿತ್ತು.. ತಂದೆ-ತಾಯಿ ಇಬ್ಬರೂ ಕೂಲಿ ಕೆಲಸ ಮಾಡುತ್ತಾರೆ.. ಹೀಗಾಗಿ ಅವರು ತಮ್ಮ ಐದು ವರ್ಷದ ಮಗನನ್ನು ಮನೆಯಲ್ಲೇ ಬಿಟ್ಟು ಹೋಗುತ್ತಿದ್ದರು..

ನಿನ್ನೆ ಕೂಡಾ ಅದೇ ರೀತಿ ಮಗನನ್ನು ಮನೆಯಲ್ಲೇ ಬಿಟ್ಟು ಕೂಲಿಗೆ ಹೋಗಿದ್ದರು.. ಸಂಜೆ ಬಂದು ನೋಡಿದಾಗ ಮಗು ಕಾಣಿಸಿಲ್ಲ.. ಎಲ್ಲಾ ಕಡೆ ಹುಡುಕಾಡಿದರೂ ಮಗು ಸಿಕ್ಕಿಲ್ಲ.. ಕೊನೆಗೆ ನೀರಿನ ಸಂಪಿನಲ್ಲಿ ನೋಡಿದಾಗ ಅದರಲ್ಲಿ ಮಗು ಬಿದ್ದು ಸಾವನ್ನಪ್ಪಿರುವುದು ಕಂಡುಬಂದಿದೆ.. ಕೆಆರ್​ಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share Post