CrimeNational

ಮದುವೆಯಲ್ಲೇ ವರನಿಗೆ ಧರ್ಮದೇಟು ಕೊಟ್ಟ ವಧುವಿನ ಮಾಜಿ ಪ್ರಿಯತಮ!

ಚಿತ್ತೋರ್‌ಗಢ; ಮದುವೆ ಮಂಟಪದಲ್ಲಿ ನಾನಾ ಅವಾಂತರಗಳು ನಡೆಯುತ್ತಿರುತ್ತದೆ.. ತಾಳಿ ಕಟ್ಟೋ ಸಮಯಕ್ಕೆ ವಧು ಮದುವೆ ಬೇಡ ಎನ್ನುವುದು, ಪ್ರಿಯಕರ ಅಥವಾ ಪ್ರಿಯತಮೆ ಮದುವೆ ಮಂಟಪಕ್ಕೆ ಎಂಟ್ರಿ ಕೊಡುವುದು.. ಹೀಗೆ ಏನೇನೋ ನಡೆಯುತ್ತಿರುತ್ತವೆ.. ಇಲ್ಲಿ ಮಾಜಿ ಪ್ರಿಯತಮೆಯ ಮದುವೆಗೆ ಪ್ರಿಯತಮ ಬಂದಿದ್ದಾನೆ.. ಸುಮ್ಮನೆ ಇರದೇ ವರನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ.. ರಿಸೆಪ್ಷನ್‌ ನಡೆಯುವಾಗ ಎಂಟ್ರಿ ಕೊಟ್ಟ ಪ್ರಿಯಕರ ವೇದಿಕೆ ಮೇಲೆ ಏರಿ ವರನಿಗೆ ಚೆನ್ನಾಗಿ ಬಾರಿಸಿದ್ದಾನೆ.. ರಾಜಸ್ಥಾನ್‌ ಚಿತ್ತೋರ್‌ಗಢ ಜಿಲ್ಲೆಯ ಭಿಲ್ವಾರದಲ್ಲಿ ಈ ಘಟನೆ ನಡೆದಿದೆ..

ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.. ವಧು ವರರಿಗೆ ಶುಭ ಕೋರುವ ನೆಪದಲ್ಲಿ ವೇದಿಕೆಗೆ ಬಂದ ವಶುವಿನ ಮಾಜಿ ಪ್ರಿಯಕರ, ವರನ ಮೇಲೆ ದಾಳಿ ಮಾಡಿದ್ದಾನೆ.. ಸಾಲದೆಂಬಂತೆ ಚಾಕುವಿನಿಂದಲೂ ಇರಿಯಲು ಹೋಗಿದ್ದಾನೆ.. ವರನ ಅದೃಷ್ಟ ಚೆನ್ನಾಗಿರಬೇಕು, ಹೆಚ್ಚೇನೂ ಗಾಯವಾಗಿಲ್ಲ.. ಕೂಡಲೇ ಅಲ್ಲಿದ್ದವರು ಆರೋಪಿ ಶಂಕರ್‌ ಲಾಲ್‌ ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.. ವಧು ಮತ್ತು ಶಂಕರ್‌ ಲಾಲ್‌ ಎರಡು ವರ್ಷಗಳ ಹಿಂದೆ ಒಂದೇ ಶಾಲೆಯಲ್ಲಿ ಶಿಕ್ಷಕರಾಗಿದ್ದು, ಪರಸ್ಪರ ಪ್ರೀತಿ ಮಾಡುತ್ತಿದ್ದರು ಎನ್ನಲಾಗಿದೆ.. ನಂತರ ಇಬ್ಬರ ನಡುವೆ ವೈಮನಸ್ಯ ಉಂಟಾಗಿ ಬ್ರೇಕಪ್‌ ಆಗಿತ್ತು.. ಹೀಗಾಗಿ ಮನೆಯವರು ನೋಡಿದ ವ್ಯಕ್ತಿ ಜೊತೆ ಆಕೆ ಮದುವೆಯಾಗುತ್ತಿದ್ದಳು. ಈ ವೇಳೆ ಬಂದ ಮಾಜಿ ಪ್ರಿಯಕರ ವರನ ಮೇಲೆ ದಾಳಿ ಮಾಡಿದ್ದಾನೆ..

Share Post