BengaluruCrime

ಈಕೆಯಿಂದಾನೇ ಅಂತೆ ಬೆಂಗಳೂರಿಗೆ ಲಾಭ ಆಗ್ತಿರೋದು!; ನಾಲಗೆ ಹರಿಬಿಟ್ಟ ಉತ್ತರದ ಯುವತಿ!

ಬೆಂಗಳೂರು; ನಮ್ಮಿಂದಾನೇ ಬೆಂಗಳೂರು ನಡೀತಿರೋದು ಎಂದು ಹೇಳಿ ಉತ್ತರ ಭಾರತದ ಯುವತಿಯೊಬ್ಬಳು ಇಕ್ಕಟ್ಟಿಗೆ ಸಿಲುಕಿದ್ದಾಳೆ.. ಇತ್ತೀಚೆಗೆ ಓಲಾ ಬುಕ್ಕಿಂಗ್‌ ಕ್ಯಾನ್ಸಲ್‌ ಮಾಡಿದ ಕಾರಣಕ್ಕೆ ಆಟೋ ಚಾಲಕನೊಬ್ಬ ಯುವತಿಯೊಬ್ಬಳ ಮೇಲೆ ಹಲ್ಲೆ ಮಾಡಿದ್ದ.. ಅದಾದ ಮೇಲೆ ಪೊಲೀಸರು ಆಟೋ ಚಾಲಕರ ವಿರುದ್ಧ ಕ್ರಮ ಕೈಗೊಂಡಿದ್ದಾರೆ.. ಹೀಗಿದ್ದರೂ ಈ ಘಟನೆ ಖಂಡಿಸಿರುವ ಮತ್ತೊಬ್ಬ ಉತ್ತರ ಭಾರತದ ಯುವತಿ, ಬೆಂಗಳೂರು ನಮ್ಮಿಂದಾನೇ ನಡೀತಿರೋದು ಎಂದು ಸಾಮಾಜಿಕ ಜಾಲತಾಣದಲ್ಲಿ ಅಬ್ಬರಿಸಿದ್ದಾಳೆ..
ದೇಶದ ಬೇರೆ ಬೇರೆ ಕಡೆಯಿಂದ ಬಂದು ನಮ್ಮಂತಹವರು ಇಲ್ಲಿ ಕೆಲಸ ಮಾಡುತ್ತಿರುವುದರಿಂದಲೇ ಬೆಂಗಳೂರು ಡೆವೆಲಪ್‌ ಆಗಿರೋದು. ನಾವೆಲ್ಲಾ ಇಲ್ಲಿ ಕೆಲಸ ಮಾಡಿ ತೆರಿಗೆ ಕಟ್ತಾ ಇದ್ದೇವೆ.. ಬಾಡಿಗೆ ಮನೆಯಲ್ಲಿಟ್ಟು ಬಾಡಿಗೆ ಕಟ್ಟುತ್ತಿದ್ದೇವೆ.. ಇದರಿಂದಾಗಿ ಬೆಂಗೂರಿನ ಆರ್ಥಿಕತೆ ಬೆಳೆಯುತ್ತಿದೆ ಎಂದು ಆಕೆ ಹೇಳಿದ್ದಳು.. ಇದಕ್ಕೆ ಕನ್ನಡಿಗರಿಂದ ಆಕ್ರೋಶ ವ್ಯಕ್ತವಾಗಿದೆ.. ಯಾವಾಗ ಇದು ದೊಡ್ಡದಾಯಿತೋ ಯುವತಿಗೆ ತಪ್ಪು ಅರಿವಾಗಿದೆ.. ಕೂಡಲೇ ವಿಡಿಯೋ ಡಿಲೀಟ್‌ ಮಾಡಿದ್ದಾಳೆ.. ಸಾಲದೆಂಬಂತೆ ಕನ್ನಡಿಗರ ಕ್ಷಮೆ ಕೂಡಾ ಕೇಳಿದ್ದಾಳೆ..

Share Post