CrimeDistricts

ಜೈಶ್ರೀರಾಮ್‌ ಎಂದಿದ್ದಕ್ಕೆ ಯುವಕನ ಮೇಲೆ ಹಲ್ಲೆ!

ಕೊಪ್ಪಳ; ಜೈ ಶ್ರೀರಾಮ್‌ ಎಂದು ಘೋಷಣೆ ಕೂಗಿದ್ದಕ್ಕೆ ಗುಂಪೊಂದು ಯುವಕನೊಬ್ಬ ಮೇಲೆ ಹಲ್ಲೆ ಮಾಡಿದೆ ಎಂಬ ಆರೋಪ ಕೇಳಿಬಂದಿದೆ.. ಕುಮಾರ್‌ ರಾಥೋಡ್‌ ಎಂಬ 25 ವರ್ಷದ ಯುವಕ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.. ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಶ್ರೀರಾಮನಗರದಲ್ಲಿ ಈ ಘಟನೆ ನಡೆದಿದೆ..

ಶ್ರೀರಾಮನಗರದ ಬಾರ್‌ ವೊಂದರಲ್ಲಿ ಕುಮಾರ್‌ ರಾಥೋಡ್‌ ಜೈ ಶ್ರೀರಾಮ್‌ ಕೂಗಿದ್ದಾರೆ.. ಇದರಿಂದಾಗಿ ಕುಪಿತಗೊಂಡ ಎದುರುಗಡೆ ಟೇಬಲ್‌ನ ಯುವಕರು ಜಗಳ ತೆಗೆದಿದ್ದಾರೆ.. ಜೈ ಶ್ರೀರಾಮ್‌ ಎನ್ನಬಾರದು ಎಂದು ಕ್ಯಾತೆ ಮಾಡಿದ್ದಾರೆ.. ಸಾಲದೆಂಬಂತೆ ಹಲ್ಲೆ ಕೂಡಾ ಮಾಡಿದ್ದಾರೆ ಎಂದು ಆರೋಪ ಮಾಡಲಾಗಿದೆ..

ಗಾಯಗೊಂಡಿರುವ ಕುಮಾರ್‌ ರಾಥೋಡ್‌ ಅವರನ್ನು ಗಂಗಾವತಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.. ಸುಮಾರು 25 ಜನರ ಗುಂಪು ಹಲ್ಲೆ ಮಾಡಿದೆ ಎಂದು ಹೇಳಲಾಗುತ್ತಿದೆ.. ಎಲ್ಲರೂ ಅನ್ಯಕೋಮಿನವರು ಎಂಬ ಆರೋಪವಿದೆ.. ಈ ಬಗ್ಗೆ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ..

 

Share Post