CrimeDistricts

ಅನಾರೋಗ್ಯದಿಂದ ಬೇಸರ; ಮನನೊಂದು ಆಟೋ ಡ್ರೈವರ್‌ ಆತ್ಮಹತ್ಯೆ

ಮಡಿಕೇರಿ; ಹಲವಾರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಆಟೋ ಚಾಲಕನೊನ್ನ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಡಿಕೇರಿ ಹೊರವಲಯದ ಕೂಟ್ಟುಹೊಳೆಯಲ್ಲಿ ನಡೆದಿದೆ. ಕುಟುಂಬದವರಿಗೆ ಕರೆ ಮಾಡಿ ಸೈಫು ಎಂಬಾತ ಹೊಳೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಆತ್ಮಹತ್ಯೆಗೆ ಶರಣಾದ ಡ್ರೈವರ್‌ ಸೈಫು ಮಡಿಕೇರಿ ನಗರದ ಆಜಾದ್‌ ನಗರ ನಿವಾಸಿ ಎಂದು ತಿಳಿದುಬಂದಿದೆ. ಕಳೆದ ರಾತ್ರಿ ಮನೆಯವರಿಗೆ ಕರೆ ಮಾಡಿದ್ದ ಸೈಫು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದ. ಇದ್ರಿಂದ ಗಾಬರಿಯಾದ ಕುಟುಂಬದವರು ಕೂಟುಹೊಳೆ ಬಳಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಆಟೋ ಪತ್ತೆಯಾಗಿದ್ದು, ಹೋಲೆಯ ಬಳಿ ಮೊಬೈಲ್‌ ಹಾಗೂ ಪರ್ಸ್‌ ಸಿಕ್ಕಿದೆ. ನೀರಿನಲ್ಲಿ ಹುಡುಕಾಡಿದಾಗ ಮೃತದೇಹ ಸಿಕ್ಕಿದೆ.

Share Post