BengaluruCrime

ಕೊಲೆ ಪ್ರಕರಣದಲ್ಲಿ ಮತ್ತೊಬ್ಬ ಮಹಿಳೆ!; ಜೂನ್‌ 8ರ ಸಂಜೆಯೇ ರೇಣುಕಾಸ್ವಾಮಿ ಹತ್ಯೆ ನಡೆದಿತ್ತು!

ಬೆಂಗಳೂರು; ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಈಗಾಗಲೇ ದರ್ಶನ್‌, ಪವಿತ್ರಾಗೌಡ ಸೇರಿ 13 ಮಂದಿ ಬಂಧಿತರಾಗಿದ್ದಾರೆ.. ಆದ್ರೆ ಈ ಪ್ರಕರಣದಲ್ಲಿ ಭಾಗಿಯಾಗಿರೋದು ಇಷ್ಟೇ ಅಲ್ಲ, ಇನ್ನೂ ನಾಲ್ವರು ಕೂಡಾ ಇದ್ದಾರೆ.. ಅವರೆಲ್ಲಾ ನಾಪತ್ತೆಯಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.. ಇದರಲ್ಲಿ ಒಬ್ಬ ಮಹಿಳೆ ಕೂಡಾ ಸೇರಿದ್ದಾಳೆ.. ಅನು ಎಂಬ ಮಹಿಳೆ ಹಾಗೂ ಜಗ್ಗ, ರವಿ ಹಾಗೂ ರಾಜು ಎಂಬುವವರು ಕೂಡಾ ಈ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದು, ಅವರಿಗಾಗಿ ಹುಡುಕಾಟ ನಡೆದಿದೆ..

ಇನ್ನು ರೇಣುಸ್ವಾಮಿ ಕೊಲೆ ಜೂನ್‌ 8 ರಂದು ಮಧ್ಯರಾತ್ರಿ ನಡೆದಿದೆ ಎಂದು ಹೇಳಲಾಗಿತ್ತು.. ಆದ್ರೆ ಜೂನ್‌ 8ರಂದು ಸಂಜೆಯೇ ರೇಣುಸ್ವಾಮಿ ಕೊಲೆಯಾಗಿದ್ದ ಎಂದು ತಿಳಿದುಬಂದಿದೆ.. ರೇಣುಕಾಸ್ವಾಮಿಯನ್ನು ಜೂನ್‌ ಎಂಟರಂದು ಬೆಳಗ್ಗೆ 11 ಗಂಟೆಗೆ ಚಿತ್ರದುರ್ಗದಲ್ಲಿ ಕಿಡ್ಯ್ನಾಪ್‌ ಮಾಡಲಾಗಿದೆ.. ರಾಘವೇಂದ್ರ, ನಂದೀಪ್‌ ಹಾಗೂ ಇತರೆ ಇಬ್ಬರು ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆತಂದಿದ್ದಾರೆ..

ಜೂನ್‌ ಎಂಟರಂದೇ ಮಧ್ಯಾಹ್ನ 2 ಗಂಟೆ ಸುಮಾರಿಗೆ ಪಟ್ಟಣಗೆರೆಯ ಶೆಡ್‌ಗೆ ಕರೆದುಕೊಂಡು ಬರಲಾಗಿದೆ.. ಅಲ್ಲಿ ದರ್ಶನ್‌ ಸಹಚರರಾದ ಪವನ್‌, ಕಾರ್ತೀಕ್‌, ಪ್ರದೋಶ್‌ ಎಂಬುವವರು ರೇಣುಕಾಸ್ವಾಮಿ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ಮಾಡಿದ್ದಾರೆ.. ರೇಣುಕಾಸ್ವಾಮಿಯ ಕಾಲು ಅಗಲಿಸಿ ಮರ್ಮಾಂಗಕ್ಕೆ ಭೀಕರವಾಗಿ ಹಲ್ಲೆ ಮಾಡಲಾಗಿದೆ.. ಅಷ್ಟರಲ್ಲಾಗದೇ ರೇಣುಕಸ್ವಾಮಿಯ ಅರ್ಧ ಪ್ರಾಣ ಹೋಗಿತ್ತು ಎನ್ನಲಾಗಿದೆ.. ಅನಂತರವೂ ಉಳಿದ ಆರೋಪಿಗಳು ಹಲ್ಲೆ ಮಾಡಿದ್ದು, ದರ್ಶನ್‌ ಕೂಡಾ ಬಂದು ಹಲ್ಲೆ ಮಾಡಿದ್ದಾರೆ.. ಇದರಿಂದಾಗಿ ಸಂಜೆ 6.30ರ ಸುಮಾರಿಗೆ ರೇಣುಕಾಸ್ವಾಮಿ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ..

ಇನ್ನು ಕೊಲೆಯಾದ ರೇಣುಕಾಸ್ವಾಮಿಯ ಮೃತದೇಹ ಏನು ಮಾಡಬೇಕು ಎಂದು ಗೊತ್ತಾಗದೇ ಮಧ್ಯರಾತ್ರಿ 1 ಗಂಟೆಯವರೆಗೂ ಅಲ್ಲಿಯೇ ಇದ್ದಾರೆ.. ಅನಂತರ ದರ್ಶನ್‌ಗೆ ಮಾಹಿತಿ ಕೊಟ್ಟು, ಶವ ಬಿಸಾಡುವ ಡೀಲ್‌ ಮಾಡಿದ್ದಾರೆ.. ಡೀಲ್‌ ಮುಗಿದ ಮೇಲೆ ಜೂನ್‌ 9ರಂದು ಬೆಳಗ್ಗೆ ಸುಮನಹಳ್ಳಿ ರಾಜಕಾಲುವೆ ಬಳಿ ರೇಣುಕಾಸ್ವಾಮಿ ಶವವನ್ನು ಎಸೆದುಹೋಗಲಾಗಿದೆ ಎಂದು ಹೇಳಲಾಗುತ್ತಿದೆ..

 

Share Post