CrimeNational

ಮಗನ ಚಿತಾಭಸ್ಮ ನದಿಗೆ ಬಿಟ್ಟು ವಾಪಸ್‌ ಬರುವಾಗ ಅಪಘಾತ; ಇಬ್ಬರ ದುರ್ಮರಣ!

ಮೀರತ್‌; ಮಗನ ಚಿತಾಭಸ್ಮವನ್ನು ನದಿಗೆ ಬಿಟ್ಟು ವಾಪಸ್‌ ಬರುತ್ತಿರುವಾಗ ಭೀಕರ ಅಪಘಾತ ನಡೆದಿದ್ದು, ಇಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ.. ಮೀರತ್​ನ ದೆಹಲಿ-ಡೆಹ್ರಾಡೂನ್​ ಹೆದ್ದಾರಿಯಲ್ಲಿ ನಿಂತಿದ್ದ ಬಸ್‌ ಗೆ ಕಾರು ಡಿಕ್ಕಿ ಹೊಡೆದಿದ್ರಿಂದ ಈ ದುರ್ಘಟನೆ ನಡೆದಿದೆ..

ವಲೀದ್​​​ಪುರ ಗ್ರಾಮದ ಮುಂಭಾಗದ ರಸ್ತೆ ಬದಿ ಬಸ್‌ ಪಂಕ್ಚರ್‌ ಆಗಿ ನಿಂತಿತ್ತು.. ಬಸ್‌ನ ಸಿಬ್ಬಂದಿ ಟೈರ್‌ ಬದಲಿಸುತ್ತಿದ್ದರು..ಈ ವೇಳೆ ವೇಗವಾಗಿ ಬಂದ ಕಾರು ಅದಕ್ಕೆ ಡಿಕ್ಕಿ ಹೊಡೆದಿದೆ.. ಕಾರಿನಲ್ಲಿದ್ದವರು ಹರಿದ್ವಾರದಲ್ಲಿ ಚಿತಾಭಸ್ಮವನ್ನು ನದಿಗೆ ಬಿಟ್ಟು ವಾಪಸ್‌ ಬರುತ್ತಿದ್ದರು ಎಂದು ತಿಳಿದುಬಂದಿದೆ..

ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರಿಬ್ಬರೂ ದೆಹಲಿ ಮೂಲದ ವಿಜಯ್​ ಪಾರ್ಕ್​ನ ಮೌಜ್​ಪುರದವರು ಎಂದು ಗುರುತಿಸಲಾಗಿದೆ..  ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ..  6 ತಿಂಗಳ ಹೆಣ್ಣು ಮಗು ಪವಾಡ ಸದೃಷ ರೀತಿಯಲ್ಲಿ ಪಾರಾಗಿದ್ದಾಳೆ..

 

Share Post