CrimeDistricts

ಬಬಲೇಶ್ವರ ಬಳಿ ಭೀಕರ ಅಪಘಾತ; ವಿಜಯಪುರದ ನಾಲ್ವರು ದರ್ಮರಣ!

ವಿಜಯಪುರ; ವಿಜಯಪುರ ಜಿಲ್ಲೆ ಬಬಲೇಶ್ವರ ತಾಲ್ಲೂಕಿನಲ್ಲಿ ಭೀಕರ ಅಪಘಾತ ನಡೆದಿದೆ.. ಅರ್ಜುನಗಿ ಗ್ರಾಮದ ಬಳಿ ಕಾರು ಹಾಗೂ ಲಾರಿಯ ನಡುವೆ ಭೀಕರ ಅಪಘಾತ ನಡೆದಿದೆ.. ಘಟನೆಯಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ..

ಇದನ್ನೂ ಓದಿ; ಮನುಷ್ಯರಂತೆ ಮೆತ್ತಗಿದೆ ಈ ದೇವರ ದೇಹ; ಹೊಕ್ಕುಳ ತೀರ್ಥದಿಂದ ಸಂತಾನ ಭಾಗ್ಯ!

ಕಾರು-ಲಾರಿ ಮುಖಾಮುಖಿ ಡಿಕ್ಕಿ;

ವಿಜಯಪುರ ಮೂಲದವರು ಜಮಖಂಡಿಯಲ್ಲಿರುವ ದೇಗುಲಕ್ಕೆ ಕಾರಿನಲ್ಲಿ ಹೋಗುತ್ತಿದ್ದರು.. ಅರ್ಜುಣಗಿ ಬಳಿ ಬಂದಾಗಿ ಎದುರಿಗೆ ಬಂದ ಲಾರಿ ಅದಕ್ಕೆ ಡಿಕ್ಕಿ ಹೊಡೆದಿದೆ.. ಸಿಮೆಂಟ್‌ ಸಾಗಿಸುತ್ತಿದ್ದ ಲಾರಿ ಹಾಗೂ ಕಾರಿನ ನಡುವೆ ಡಿಕ್ಕಿ ಸಂಭವಿಸಿದ್ದು, ಕಾರಿನಲ್ಲಿದ್ದ ನಾಲ್ವರು ಸಾವನ್ನಪ್ಪಿದ್ದಾರೆ.

 

ಇದನ್ನೂ ಓದಿ;ಮಾಂಸ ಕತ್ತರಿಸುವ ಕತ್ತಿಗಳಿಂದ ಮಸಾಜ್‌; ಹೀಗೂ ಉಂಟಾ..?

ದೇವಸ್ಥಾನಕ್ಕೆ ಹೋಗುತ್ತಿದ್ದವರಿಗೆ ಯಮನ ದರ್ಶನ;

ವಿಜಪುರದಿಂದ ದೇವಸ್ಥಾನಕ್ಕೆ ತೆರಳುತ್ತಿದ್ದವರಿಗೆ ದಾರಿಯಲ್ಲೇ ಯಮನ ದರ್ಶನವಾಗಿದೆ.. ನಾಲ್ವರು ದಾರುಣವಾಗಿ ಸಾವನ್ನಪ್ಪಿದ್ದಾರೆ.. ಅರ್ಜುನ ಕುಶಾಲಸಿಂಗ್ ರಜಪೂತ (32), ರವಿನಾಥ ಪತ್ತಾರ (52), ಪುಷ್ಪಾ ರವಿನಾಥ ಪತ್ತಾರ (40), ಮೇಘರಾಜ ರಜಪೂತ (12) ಮೃತರು ಎಂದು ಗುರುತಿಸಲಾಗಿದೆ. ಈವರು KA 28 D 1021 ಸಂಖ್ಯೆಯ ಕಾರಿನಲ್ಲಿ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ವಿಜಯಪುರ ಎಸ್​ಪಿ ಋಷಿಕೇಶ ಸೋನೆವಣೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಬಲೇಶ್ವರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ; ನೀವೇಕೆ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲಿಲ್ಲ?; ಸಿಎಂ ಸಿದ್ದರಾಮಯ್ಯ ನೇರ ಪ್ರಶ್ನೆ

Share Post