BengaluruCrime

ಮಗು ಇದೆ ಎಂದರೂ ಬಿಡದೆ ಕಾರಿಗೆ ಕಲ್ಲು ತೂರಿದ ದುರುಳ!

ಬೆಂಗಳೂರು; ಕಾರಿನಲ್ಲಿ ಮಗು ಇದೆ ಎಂದು ಕೂಗಾಡಿದರೂ ಬಿಡದೇ ಕಿಡಿಗೇಡಿಯೊಬ್ಬ ಕಾರಿನ ಗ್ಲಾಸ್‌ ಮೇಲೆ ಕಲ್ಲು ಎತ್ತಿ ಹಾಕಿದ್ದಾನೆ.. ಬೆಂಗಳೂರಿನ ಸರ್ಜಾಪುರ ರಸ್ತೆ ದೊಡ್ಡಕನ್ನೆಲ್ಲಿ ಎಂಬಲ್ಲಿ ಈ ಘಟನೆ ನಡೆದಿದೆ.. ಕಳೆದ ರಾತ್ರಿ 10.30ರ ಸುಮಾರಿಗೆ ಈ ಘಟನೆ ನಡೆದಿದ್ದು, ಕಾರಿನಲ್ಲಿದ್ದವರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.. ಬೈಕ್‌ ಸವಾರ ಈ ಕೃತ್ಯ ಎಸಗಿದ್ದು, ಎಲ್ಲೆಡೆಯಿಂದ ಆಕ್ರೋಶ ವ್ಯಕ್ತವಾಗಿದೆ..
ಇಂಡಿಕೇಟರ್‌ ಹಾಕದೇ ಕಾರು ಚಲಾಯಿಸಿದ್ದಾನೆ ಎಂಬ ಕಾರಣಕ್ಕೇ ಕಾರು ಅಡ್ಡ ಹಾಕಿರುವ ಬೈಕ್‌ ಸವಾರ, ಗಲಾಟೆಗೆ ಇಳಿದಿದ್ದಾರೆ.. ಕಾರಿನಲ್ಲಿ ಹೆಣ್ಣು ಮಕ್ಕಳು, ಮಗು ಇದೆ ಎಂದರೂ ಕೇಳದೇ ಕಾರಿನ ವೈಪರ್‌ ಕಿತ್ತು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾನೆ.. ಅನಂತರ ಕಾರಿನ ಗ್ಲಾಸ್‌ಗೆ ಕಲ್ಲಿನಿಂದ ಹೊಡೆದಿದ್ದಾನೆ.. ಇದರಿಂದಾಗಿ ಕಾರಿನ ಗಾಜು ಪುಡಿಪುಡಿಯಾಗಿದೆ..
ಘಟನೆ ನಂತರ ಬೆಳ್ಳಂದೂರು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿ ವಿಚಾರಣೆ ನಡೆಸಿದ್ದಾರೆ..

Share Post