CrimeDistricts

ಉದ್ಯಮಿ ಮೇಲೆ 8 ಸುತ್ತು ಗುಂಡಿನ ದಾಳಿ!; ಕುಶಾಲನಗರದಲ್ಲಿ ನಡೆದಿದ್ದಾರೂ ಏನು..?

ಮಡಿಕೇರಿ; ಹಾಸನದಲ್ಲಿ ನಾಲ್ಕು ದಿನಗಳ ಹಿಂದೆ ಗುಂಡಿ ದಾಳಿ ನಡೆದಿತ್ತು.. ಈ ಘಟನೆ ಮಾಸುವ ಮುನ್ನವೇ ಕೊಡಗಿನಲ್ಲಿ ಗುಂಡಿನ ಸದ್ದು ಕೇಳಿಬಂದಿದೆ.. ಕುಶಾಲನಗರ ಪಟ್ಟಣದಲ್ಲಿ ಉದ್ಯಮಿ ಶಶಿಧರ್‌ ಕಾರಿನಲ್ಲಿ ಹೋಗುತ್ತಿದ್ದಾಗ ಗುಂಡಿನ ದಾಳಿ ನಡೆಸಲಾಗಿದೆ.. ಇದರಿಂದಾಗಿ ಶಶಿಧರ್‌ ಅವರ ಕಾಲಿಗೆ ಗಂಭೀರವಾಗಿ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ..

ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆಯಿಂದಾಗಿ ಅನುದೀಪ್‌ ಎಂಬಾತ ಎಂಟು ಸುತ್ತು ಗುಂಡು ಹಾರಿಸಿದ್ದಾನೆ ಎಂದು ತಿಳಿದುಬಂದಿದೆ..ಇದರಿಂದಾಗಿ ಉದ್ಯಮಿ ಶಶಿಧರ್‌ ಅವರು ಫಾರ್ಚೂನರ್‌ ಕಾರಿಗೆ ಗುಂಡಿನ ತೂತುಗಳು ಬಿದ್ದಿವೆ.. ಈ ಬಗ್ಗೆ ಕುಶಾಲನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ..

 

Share Post