CrimeNational

ಅಕ್ರಮ ಚಿನ್ನ ಸಾಗಣೆ; ಗಗನಸಖಿ ಅರೆಸ್ಟ್

ಕಣ್ಣೂರು; ಚಿನ್ನದ ಕೇಸ್ನಲ್ಲಿ ಚಿನ್ನದಂತ ಗಗನಸಖಿ ಅರೆಸ್ಟ್ ಆಗಿದ್ದಾಳೆ.. ಒಂದು ಕೆಜಿ ಚಿನ್ನವನ್ನು ಗುದ ದ್ವಾರದಲ್ಲಿ ಇಟ್ಟುಕೊಂಡು ಬಂದಿದ್ದ ಗಗನಸಖಿ ಸುರಭಿ ಖಾತುನ್ ಳನ್ನು ಕೇರಳದ ಕಣ್ಣೂರಿನ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ..

  ಗುದನಾಳದಲ್ಲಿ ಬರೋಬ್ಬರಿ ಒಂದು ಕೆಜಿ ಚಿನ್ನ ಅಡಗಿಸಿಟ್ಟಿದ್ದಳು ಎಂದು ತಿಳಿದು ಬಂದಿದೆ… ಬಂಧಿತ ಗಗನಸಖಿ ಸುರಭಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಕೆಲಸ ಮಾಡುತ್ತಿದ್ದರು. ಹಲವು ಭಾರಿ ಈಕೆ ಅಕ್ರಮವಾಗಿ ಚಿನ್ನ ಸಾಗಿಸಿದ್ದಾಳೆ ಎಂದು ತಿಳಿದು ಬಂದಿದೆ..

    ಮೇ 28 ರಂದು ಮಸ್ಕತ್‌ನಿಂದ ಕಣ್ಣೂರಿಗೆ ಬಂದಿಳಿದ ವಿಮಾನದಲ್ಲಿ ಸುರಭಿ ಕ್ಯಾಬಿನ್ ಸಿಬ್ಬಂದಿ ಆಗಿದ್ದರು. ಕಣ್ಣೂರು ವಿಮಾನ ನಿಲ್ದಾಣದಲ್ಲಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.

ಸುರಭಿ ಖತುನ್​ರನ್ನು ಬಂಧಿಸಿದ ಅಧಿಕಾರಿಗಳು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು. 14 ದಿನಗಳ ಕಸ್ಟಡಿಗೆ ನೀಡಲಾಗಿದೆ.

Share Post