Cinema

ಅಪ್ಪು ಕಥೆಗೆ ಯುವ ರಾಜ್‌ಕುಮಾರ್‌ ನಾಯಕ

ಬೆಂಗಳೂರು : ಪುನೀತ್‌ ರಾಜ್‌ಕುಮಾರ್‌ ಸಾಕಷ್ಟು ಸಿನಿಮಾ ಮಾಡುವ ಪ್ಲಾನ್‌ನಲ್ಲಿದ್ದರು. ಅವರ ಅಕಾಲಿಕ ಮರಣದಿಂದ ಎಲ್ಲಾ ಲೆಕ್ಕಾಚಾರಗಳು ತಲೆಕೆಳಗಾಗಿವೆ. ಅಪ್ಪು ಅವರಿಗಾಗಿ ಮಾಡಬೇಕೆಂದುಕೊಂಡಿದ್ದ ಕಥೆಗಳನ್ನು ಯುವ ರಾಜ್‌ಕುಮಾರ್‌ ಅವರಿಗೆ ಮಾಡಿ ಎಂದು ಅಭಿಮಾನಿಗಳು ಒತ್ತಾಯ ಮಾಡಿದ್ದರು.

ಈಗ ಸಂತೋಷ್‌ ಆನಂದ್‌ ರಾಮ್‌ ಅಭಿಮಾನಿಗಳ ಆಸೆಯಂತೆ ಯುವ ರಾಜ್‌ ಕುಮಾರ್‌ ಅವರನ್ನು ಹಾಕಿಕೊಂಡು ಸಿನಿಮಾ ಮಾಡಲು ನಿರ್ಧರಿಸಿದ್ದಾರೆಂದು ಗಾಂಧಿನಗರ ಮಾತನಾಡಿಕೊಳ್ಳುತ್ತಿದೆ. ಅಪ್ಪು ಅವರಿಗಾಗಿ ಮಾಡಬೇಕಿದ್ದ ಕಥೆಯನ್ನು ಯುವ ಅವರಿಗೆ ಮಾಡಲು ಹೊರಟಿದ್ದಾರೆ. ಅಧಿಕೃತ ಮಾಹಿತಿ ಹೊರ ಬೀಳಬೇಕಿದೆ.

Share Post