Cinema

YASH; ನ್ಯೂ ಲುಕ್‌ನಲ್ಲಿ ಕಾಣಿಸಿಕೊಂಡ ನಟ ಯಶ್‌; ಅಭಿಮಾನಿಗಳು ಫುಲ್‌ ಖುಷ್‌

ಬಳ್ಳಾರಿ; ರಾಖಿ ಭಾಯ್‌.. ಈ ಹೆಸರು ಯಾರಿಗೆ ಗೊತ್ತಿಲ್ಲ ಹೇಳಿ.. ಇಡೀ ದೇಶಕ್ಕೇ ಗೊತ್ತು ರಾಖಿ ಭಾಯ್‌.. ವಿದೇಶದಲ್ಲೂ ಕೂಡಾ ರಾಖಿ ಭಾಯ್‌ ಫೇಮಸ್‌… ತುಂಬಾ ಕಷ್ಟದಿಂದ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಕನ್ನಡದಲ್ಲಿ ರಾಕಿಂಗ್‌ ಸ್ಟಾರ್‌ ಪಟ್ಟ ಗಿಟ್ಟಿಸಿಕೊಂಡಿರುವ ಯಶ್‌ ಬಗ್ಗೆ ನಾವು ಹೇಳ್ತಾಇರೋದು ಅನ್ನೋದು ನಿಮಗೂ ಗೊತ್ತು.. ಕೆಜಿಎಫ್‌ ಸಿನಿಮಾ ನಂತರ ಯಶ್‌ ಇಡೀ ದೇಶಕ್ಕೆ ಹಾಗೂ ಪ್ರಪಂಚಕ್ಕೆ ಗೊತ್ತಾಗಿದ್ದಾರೆ. ಪ್ರಪಂಚದಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಕೂಡಾ ಅವರು ಗಿಟ್ಟಿಸಿಕೊಂಡಿದ್ದಾರೆ.. ಹೀಗಾಗಿ ಯಶ್‌ ಈಗ ಏನೇ ಮಾದರೂ ಸುದ್ದಿಯಾಗುತ್ತದೆ.. ಮುಂಬರುವ ಅವರ ಸಿನಿಮಾಗಳ ಬಗ್ಗೆಯೂ ನಿರೀಕ್ಷೆ ಹೆಚ್ಚಿರುತ್ತದೆ.. ಅದೇ ರಾಖಿಭಾಯ್‌ ಹೊಸ ಲುಕ್‌ ಸಾಕಷ್ಟು ಕುತೂಹಲ ಹಾಗೂ ನಿರೀಕ್ಷೆಯನ್ನು ಹುಟ್ಟು ಹಾಕಿದೆ.

ಇದನ್ನೂ ಓದಿ;Turmeric; ಬೇಸಿಗೆಯಲ್ಲಿ ನಿಮ್ಮ ಚರ್ಮಕ್ಕೆ ಬೇಕೇಬೇಕು ಅರಿಶಿನ!

ಬಳ್ಳಾರಿಯಲ್ಲಿ ರಗಡ್‌ ಲುಕ್‌ನಲ್ಲಿ ಯಶ್‌;

ಬಳ್ಳಾರಿಯಲ್ಲಿ ರಗಡ್‌ ಲುಕ್‌ನಲ್ಲಿ ಯಶ್‌; ಯಶ್‌ ಈಗ ಬ್ಯುಸಿ ನಟ.. ನಟನೆಯ ಜೊತೆ ಸಮಾಜಸೇವಾ ಕಾರ್ಯಕ್ರಮಗಳನ್ನೂ ಮಾಡುತ್ತಾರೆ.. ಇದರ ಜೊತೆಗೆ ಎಲ್ಲಾ ಕಾರ್ಯಕ್ರಮಗಳಲ್ಲೂ ಪಾಲ್ಗೊಳ್ಳುತ್ತಾರೆ.. ಅದೇ ರೀತಿ ಅವರು ಇಂದು ಬಳ್ಳಾರಿಗೆ ಭೇಟಿ ನೀಡಿದಾರೆ. ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದಾರೆ.. ದಾರಿ ಮಧ್ಯೆ ಅವರು ಅಭಿಮಾನಿಗಳನ್ನು ಭೇಟಿಯಾಗಿದ್ದಾರೆ. ಈ ವೇಳೆ ಯಶ್‌ ಅವರ ರಗಡ್‌ ಲುಕ್‌ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ..

ದೇಗುಲ ಉದ್ಘಾಟನಾ ಕಾರ್ಯಕ್ರಮದಲ್ಲಿ ನಟ ಯಶ್‌;

ದೇಗುಲ ಉದ್ಘಾಟನಾ ಕಾರ್ಯಕ್ರಮದಲ್ಲಿ ನಟ ಯಶ್‌; ಬಳ್ಳಾರಿಯಲ್ಲಿ ನೂತನವಾಗಿ ಅಮೃತೇಶ್ವರ ದೇವಾಲಯ ನಿರ್ಮಾಣ ಮಾಡಲಾಗಿದೆ. ತೆಲುಗಿನ ಚಿತ್ರ ನಿರ್ದೇಶಕ ಕೊರಪಾಟಿ ಸಾಯಿ ಅವರು ಈ ದೇಗುಲವನ್ನು ನಿರ್ಮಾಣ ಮಾಡಿದ್ದಾರೆ. ಆ ದೇವಸ್ಥಾನದ ಪ್ರಾಣಪ್ರತಿಷ್ಠಾಪನೆ ನಡೆಯಿತು. ಈ ಕಾರ್ಯಕ್ರಮದಲ್ಲಿ ನಟ ಯಶ್‌ ಪಾಲ್ಗೊಂಡಿದ್ದರು.

ಇದನ್ನೂ ಓದಿ; Deepika padukone; ತಾಯಿಯಾಗ್ತಿದ್ದಾರಂತೆ ನಟಿ ದೀಪಿಕಾ ಪಡುಕೋಣೆ!

 

ರಾಜಮೌಳಿ ದಂಪತಿ ಕೂಡಾ ಭಾಗಿ;

ರಾಜಮೌಳಿ ದಂಪತಿ ಕೂಡಾ ಭಾಗಿ; ಶ್ರೀ ಅಮೃತೇಶ್ವರ ದೇವಸ್ಥಾನದ ವಿಶೇಷ ಪೂಜಾ ಕಾರ್ಯಕ್ರಮ ಕೂಡಾ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಖ್ಯಾತ ಚಿತ್ರ ನಿರ್ದೇಶಕ, ಬಾಹುಬಲಿ ಖ್ಯಾತಿಯ ರಾಜಮೌಳಿ ಹಾಗೂ ಅವರ ಪತ್ನಿ ರಮಾ ರಾಜಮೌಳಿ ಕೂಡಾ ಪಾಲ್ಗೊಂಡಿದ್ದಾರೆ. ಇದೇ ವೇಳೆ ಇಂದು ರಾಕಿಂಗ್ ಸ್ಟಾರ್ ಯಶ್ ಕೂಡಾ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

ಇದನ್ನೂ ಓದಿ; Low Iron Levels; ಐರನ್‌ ಕಡಿಮೆ ಇದ್ದರೆ ದೇಹದಲ್ಲಾಗುವ ಬದಲಾವಣೆ ಏನು..?

Share Post