Cinema

ಸೂರ್ಯವಂಶ ಸಿನಿಮಾದ ನಾಟಿ ಕೋಳಿ ಸೀನ್‌ : ವಿಷ್ಣು ದಾದಾ ಏನು ಹೇಳಿದ್ದರು ಗೊತ್ತಾ ?

ಕನ್ನಡ ಚಿತ್ರರಂಗದಲ್ಲಿ ಅಣ್ಣಾವ್ರನ್ನು ಬಿಟ್ಟರೆ ಮುಖ್ಯವಾಗಿ ಕಾಣಿಸ್ತಿದದ್ದು ಅಂದರೆ ಅದು ವಿಷ್ಣು ದಾದಾ. ಅಣ್ಣಾವ್ರನ್ನು ಜನರು ಎಷ್ಟು ಪ್ರೀತಿಸುತ್ತಿದ್ದರೋ ಅಷ್ಟೇ ವಿಷ್ಣು ದಾದಾರನ್ನೂ ಪ್ರೀತಿಸುತ್ತಿದ್ದರು. ದಾದಾ ಮಾಡಿದ ಸಿನಿಮಾಗಳೆಲ್ಲವೂ ಹಿಟ್ ಆಗುತಿತ್ತು. ಸೂಪರ್ ಡೂಪರ್ ಆಗಿರುವ ಸಿನಿಮಾಗಳನ್ನು ವಿಷ್ಣುವರ್ಧನ್ ಅವರು ಕೊಡುತ್ತಾ ಬಂದಿದ್ದರು. ಕೆಲ ವರ್ಷಗಳು ವಿಷ್ಣುದಾದಾ ಅವರು ಸೋಲನ್ನು ಕಾಣ ತೊಡಗಿದರು.

ಸತತವಾಗಿ ಚಿತ್ರಗಳು ಸೋಲುತ್ತಾ ಬಂದಾಗ, ವಿಷ್ಣುವರ್ಧನ್ ಅವರ ಕಾಲ ಮುಗೀತು ಅಂತ ಜನ ಮಾತಾಡೋಕೆ ಶುರು ಮಾಡಿದ್ದರು. ಆಗ ದಾದಾ ಅವರು ಮಾಡಿದ ಸೂರ್ಯವಂಶ ಚಿತ್ರವೂ ಅವರ ಹಿಂದಿನ ಕಹಿಯನ್ನೆಲ್ಲಾ ಮರೆಸಿ ಸಕ್ಸಸ್ ಟ್ರಾಕ್ ಗೆ ಮರಳಿಸಿತ್ತು. ಈ ಚಿತ್ರದ ನಿರ್ದೇಶನ ಮಾಡಿದ್ದು ಎಸ್. ನಾರಾಯಣ್ ಅವರು. ಸಿನಿಮಾ ಶತ ದಿನೋತ್ಸವ ಪೂರೈಸಿ ಮುನ್ನುಗಿತ್ತು.

ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದ್ದು ಈಗ ಇತಿಹಾಸ. ಈ ಸಿನಿಮಾದಲ್ಲಿ ಮುಖ್ಯಮಂತ್ರಿ ಚಂದ್ರು ಮತ್ತು ದೊಡ್ಡಣ್ಣ ಅವರು ಕೂಡ ತುಂಬಾ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ಯಾರೂ ಮರೆಯಲಾಗದ ಸೀನ್ ಒಂದ್ ಇದೆ. ಮುಖ್ಯ ಮಂತ್ರಿ ಚಂದ್ರು ಮತ್ತು ದೊಡ್ಡಣ್ಣ ಕಾಂಬಿನೇಷನ್ನಿನ ನಾಟಿ ಕೋಳಿ ಸೀನ್.

ಈ ಸೀನ್ ಅನ್ನು ನೀವು ಯಾವಾಗಲೇ ನೋಡಿದರೂ ನಗು ಕಿತ್ತುಕೊಂಡು ಬರುತ್ತೆ. ಸಿನಿಮಾ ಎಲ್ಲಾ ಮುಗಿದ ಮೇಲೆ ಸ್ಕ್ರೀನಿಂಗ್ ಹಾಕ್ತಾರೆ. ಅಲ್ಲಿಯವರೆಗೂ ನಟರು ಮತ್ತು ನಟಿಯರು ಪೂರ್ತಿ ಸಿನಿಮಾ ನೋಡಿರೋದಿಲ್ಲ. ವಿಷ್ಣುವರ್ಧನ್ ಅವರಿಗೆ ಸಿನಿಮಾ ತೋರಿಸಲು ನಿರ್ಮಾಪಕರಾದ ಕುಮಾರಸ್ವಾಮಿಯವರು( ಮಾಜಿ ಮುಖ್ಯಮಂತ್ರಿಗಳು) ಸ್ಕ್ರೀನಿಂಗ್ ಹಾಕಿಸಿದ್ದಾರೆ. ಸಿನಿಮಾ ನೋಡ್ತಿದ್ದ ವಿಷ್ಣುವರ್ಧನ್ ಅವರು ನಾಟಿ ಕೋಳಿ ಸೀನ್ ಬಂದಾಗ ನಕ್ಕೂ ನಕ್ಕೂ ಸುಸ್ತಾಗಿ, “ನಾವ್ ಇಲ್ದೇ ಇದ್ದಾಗ ಏನೇನೋ ಮಾಡಿದ್ದೀರ, ಪರ್ವಾಗಿಲ್ಲ. ಹೌದು ನನಗೆ ಒಂದ್ ಅರ್ಥ ಆಗ್ತಿಲ್ಲ. ಈ ಸಿನಿಮಾಗೆ ಹೀರೋ ನಾನಾ ಅವರಾ” ಅಂತ ಕೇಳಿದ್ದರಂತೆ. ತುಂಬಾ ತಮಾಷೆಯಾಗಿ ಮುಖ್ಯಮಂತ್ರಿ ಚಂದ್ರು ಮತ್ತು ದೊಡ್ಡಣ್ಣನವರನ್ನು ಗದರಿದ್ದರಂತೆ ವಿಷ್ಣು ದಾದಾ. ಈಗ ಅವರು ನಮ್ಮೊಟ್ಟಿಗೆ ಇಲ್ಲ. ಆದರೆ ಅವರ ಸಿನಿಮಾಗಳು ನಮ್ಮೊಟ್ಟಿಗೆ ಇವೆ. ಅಂತಹ ಮೇರು ನಟನನ್ನು ಪಡೆದ ನಮ್ಮ ಕನ್ನಡ ಚಿತ್ರರಂಗವೇ ಧನ್ಯ.

Share Post