BengaluruCinemaCrime

ಅರ್ಜುನ್‌ ಸರ್ಜಾ ವಿರುದ್ಧದ ಮೀಟೂ ಕೇಸ್‌ಗೆ ಮತ್ತೆ ಜೀವ; ಶ್ರುತಿ ಹರಿಹರನ್‌ಗೆ ನೋಟಿಸ್‌

ಬೆಂಗಳೂರು; 2018ರಲ್ಲಿ ಮೀಟೂ ಪ್ರಕರಣಗಳು ಭಾರೀ ಸದ್ದು ಮಾಡಿದ್ದವು. ಅದರಲ್ಲೂ ಖ್ಯಾತ ನಟ ಅರ್ಜುನ್‌ ಸರ್ಜಾ ಅವರ ವಿರುದ್ಧ ನಟಿ ಶ್ರುತಿ ಹರಿಹರನ್‌ ಮೀಟೂ ಆರೋಪ ಮಾಡಿದ್ದರು. ಶೂಟಿಂಗ್‌ ವೇಳೆ ನನಗೆ ಕಿರುಕುಳ ನೀಡಿದ್ದಾರೆ ಎಂದು ಶ್ರುತಿ ಹರಿಹರನ್‌ ಆರೋಪ ಮಾಡಿದ್ದರು. ಆದ್ರೆ ಕಬ್ಬನ್‌ ಪಾರ್ಕ್‌ ಪೊಲೀಸರು, ಈ ಕೇಸ್‌ನಲ್ಲಿ ಸಾಕ್ಷ್ಯ ಸಿಗದ ಕಾರಣ ಬಿ ರಿಪೋರ್ಟ್‌ ಸಲ್ಲಿಸಿದ್ದರು. ಹೀಗಾಗಿ ಈ ಕೇಸ್‌ ಅಲ್ಲಿಗೆ ಮುಗಿಯಿತು ಅಂತ ಎಲ್ಲರೂ ಅಂದುಕೊಂಡಿದ್ದರು. ಆದ್ರೆ ಆ ಕೇಸ್‌ಗೆ ಈ ಮತ್ತೆ ಜೀವ ಬಂದಿದೆ.

ಕೇಸ್‌ ದಾಖಲಿಸಿದ್ದ ನಟಿ ಶ್ರುತಿ ಹರಿಹರನ್‌ ಅವರು ಕಬ್ಬನ್‌ ಪಾರ್ಕ್‌ ಪೊಲೀಸರು ಸಲ್ಲಿಸಿರುವ ಬಿ ರಿಪೋರ್ಟ್‌ನ್ನು ಕೋರ್ಟ್‌ನಲ್ಲಿ ಚಾಲೆಂಜ್‌ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ನಟಿಗೆ ಬೆಂಗಳೂರಿನ 8ನೇ ಎಸಿಎಂಎಂ ಕೋರ್ಟ್‌ ನೋಟಿಸ್‌ ಜಾರಿ ಮಾಡಿದ್ದು, ದಾಖಲೆ ಒದಗಿಸುವಂತೆ ಸೂಚನೆ ಕೊಟ್ಟಿದೆ.

ಈ ಪ್ರಕರಣದಲ್ಲಿ ಕಬ್ಬನ್‌ ಪಾರ್ಕ್‌ ಪೊಲೀಸರು ಮೂರು ವರ್ಷಗಳ ಕಾಲ ತನಿಖೆ ನಡೆಸಿದ್ದರು. ಆದ್ರೆ ಸಾಕ್ಷಿಗಳು ಸಿಕ್ಕಿಲ್ಲ ಎಂದು ಅವರು ಕೋರ್ಟ್‌ಗೆ ಬಿ ರಿಪೋರ್ಟ್‌ ಸಲ್ಲಿಸಿದ್ದರು. ಆದ್ರೆ ಶ್ರುತಿ ಹರಿಹರನ್‌ ಅವರು ಇದನ್ನು ಒಪ್ಪಿಲ್ಲ. ಅದನ್ನು ಪ್ರಶ್ನೆ ಮಾಡಿ ಕೋರ್ಟ್‌ ಮೆಟ್ಟಿಲೇರಿದ್ದಾರೆ. ವಿಸ್ಮಯ ಎಂಬ ಕನ್ನಡ ಸಿನಿಮಾದಲ್ಲಿ ನಟಿ ಶ್ರುತಿ ಹರಿಹರನ್‌ ಹಾಗೂ ನಟ ಅರ್ಜುನ್‌ ಸರ್ಜಾ ನಟನೆ ಮಾಡಿದ್ದರು. ಇದರ ಚಿತ್ರೀಕರಣದ ವೇಳೆ ಅರ್ಜುನ್‌ ಸರ್ಜಾ ನನನೆ ಕಿರುಕುಳ ನೀಡಿದ್ದರು ಎಂದು ಆರೋಪಿಸಿದ್ದರು.

Share Post