Cinema

ಬೆಳ್ಳಿ ಕಾಲುಂಗುರ ನಿರ್ದೇಶಕ ಕೆ.ವಿ.ರಾಜು ಇನ್ನಿಲ್ಲ

ಬೆಂಗಳೂರು: ಸ್ಯಾಂಡಲ್‌ವುಡ್‌ ಖ್ಯಾತ ನಿರ್ದೇಶಕ ಕೆ.ವಿ.ರಾಜು ನಿಧನರಾಗಿದ್ದಾರೆ. 67 ವರ್ಷದ ರಾಜು ಅವರು ಬೆಂಗಳೂರಿನ ರಾಜಾಜಿನಗರದಲ್ಲಿ ವಾಸವಿದ್ದರು. ಅವರ ನಿವಾಸದಲ್ಲೇ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ರಾಜಾಜಿನಗರದ ನಿವಾಸದಲ್ಲೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಂಜೆ ಹರಿಶ್ಚಂದ್ರ ಘಾಟ್‌ನಲ್ಲಿ ಅಂತ್ಯಸಂಸ್ಕಾರ ನಡೆಸಲಾಗುತ್ತದೆ ಎಂದು ತಿಳಿದುಬಂದಿದೆ.

‘ಬೆಳ್ಳಿ ಕಾಲುಂಗುರ’, ‘ಯುದ್ಧಕಾಂಡ’ ಸೇರಿದಂತೆ ಹಲವಾರು ಹಿಟ್‌ ಸಿನಿಮಾಗಳನ್ನು ಕೆ.ವಿ.ರಾಜು ಅವರು ನಿರ್ದೇಶಿಸಿದ್ದರು. ಬಾಲಿವುಡ್‌ ನಟ ಅಮಿತಾಬ್‌ ಬಚ್ಚನ್‌ ನಟನೆಯ ‘ಇಂದ್ರಜಿತ್‌’, ‘ಸುಂದರಕಾಂಡ’, ‘ಕದನ’. ‘ಪೊಲೀಸ್‌ ಲಾಕಪ್‌’, ‘ಬೆಳ್ಳಿ ಮೋಡಗಳು’,‘ಬೊಂಬಾಟ್‌ ಹುಡುಗ’, ‘ಅಭಿಜಿತ್‌’, ‘ಹುಲಿಯಾ’, ‘ಸಂಗ್ರಾಮ’, ‘ಯುದ್ಧ’ ಮುಂತಾದ ಹಿಟ್‌ ಚಿತ್ರಗಳನ್ನು ರಾಜು ಅವರು ನಿರ್ದೇಶಿಸಿದ್ದರು.

 

Share Post