Cinema

ನೀನೊಂದು ತೀರ..ನಾನೊಂದು ತೀರ ಅಂತಿದಾರೆ ಸ್ಯಾಮ್‌-ಚೈತು

ಹೈದರಾಬಾದ್: ಟಾಲಿವುಡ್‌ನ ಸೂಪರ್‌ ಜೋಡಿಗಳಲ್ಲಿನ ಒಂದಾದ ಸಮಂತಾ ಹಾಗೂ ನಾಗಚೈತನ್ಯ ವಿಚ್ಛೇದನ ಪಡೆದಿದ್ದು ಎಲ್ಲರಿಗೂ ತಿಳಿದಿರುವ ಸಂಗತಿ. ಇಬ್ಬರೂ ಸೆಲಬ್ರೆಟಿಗಳಾಗಿರುವುದರಿಂದ ಭೇಟಿಯಾಗುವ ಅವಕಾಶಗಳು ಬಂದೇ ಬರುತ್ತವೆ. ಯಾವುದೋ ಆಡಿಯೋ ಫಂಕ್ಷನ್‌, ಪ್ರೀ ರಿಲೀಸ್‌ ಈವೆಂಟ್‌, ಪಾರ್ಟಿ ಹೀಗೆ ಯಾವುದೋ ಒಂದು ಸಂದರ್ಭ ಇಬ್ಬರೂ ಮೀಟ್‌ ಅವಕಾಶ ಬರುತ್ತದೆ. ಅದು ಕೂಡ ಆಗೇ ಬಿಡ್ತು. ಯಾವುದೇ ಸಿನಿಮಾ ವಿಚಾರವಾಗಿ ರಾಮಯ್ಯ ನಾಯ್ಡು ಸ್ಟುಡಿಯೋಗೆ ಸಮಂತಾ ನಾಗಚೈತನ್ಯ ಬಂದಿದ್ರು. ಅವರಿಬ್ಬರು ಭೇಟಿಯಾಗುವ ಅವಕಾಶವೂ ಆದ್ರೆ ಅದು ನಡೆಯಲಿಲ್ಲ. ತಮ್ಮ ಬಾಡಿ ಗಾರ್ಡ್ಸ್‌ ಸಹಾಯದಿಂದ ಒಬ್ಬರನ್ನೊಬ್ಬರು ನೋಡಿಕೊಳ್ಳದೆ ಹಾಗೆ ಹೊರಟುಹೋದ್ರಂತೆ. ಸಮಂತಾ ಇರುವ ಕಡೆ ತೆರಳದೆ ಬೇರೆ ಬಾಗಿಲಿನಿಂದ ನಾಗಚೈತನ್ಯ ತೆರಳಿದ್ರಂತೆ. ಕೆಲವು ನಿಮಿಷಗಳ ಬಳಿಕ ಸಮಂತಾ ಕೂಡ ತೆರಳಿದ್ರು ಎನ್ನಲಾಗಿದೆ. ಒಟ್ಟಿನಲ್ಲಿ ಭೇಟಿಯಾಗುವ ಅವಕಾಶವಿದ್ರೂ ಮುರಿದ ಮನಸ್ಸಿನಿಂದ ದೂರವಾಗೇ ಉಳಿದರು. ಈ ವಿಚಾರ ಕೇಳಿ ಅಭಿಮಾನಿಗಳ ಮನಸಿಗೆ ಘಾಸಿಯಾಗಿರೋದಂತೂ ಸತ್ಯ.

Share Post