Cinema

ಅಲ್ಲು ಅರ್ಜುನ್‌ಗೆ ಆಕ್ಷನ್‌ ಕಟ್‌ ಹೇಳಲಿದ್ದಾರೆ ಅಟ್ಲಿ

ಹೈದರಾಬಾದ್‌ : ಅಲ್ಲು ಅರ್ಜುನ್‌ ಅವರ ಪುಷ್ಪ ಸಿನಿಮಾದ ನಂತರ ಸಾಕಷ್ಟು ಹೊಸ ರೀತಿಯ ಸಿನಿಮಾಗಳು ಅಲ್ಲು ಅವರನ್ನು ಅರಸಿ ಬರುತ್ತಿವೆ. ಮುಂಚಿನಿಂದಲೂ ಅದ್ಭುತ ಫ್ಯಾನ್ಸ್‌ ಬೇಸ್‌ ಹೊಂದಿರುವ ಅಲ್ಲು ಅರ್ಜುನ್‌ ಅವರು ಪುಷ್ಪ ಸಿನಿಮಾದ ನಂತರ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ.

ಈಗ ಅರ್ಜುನ್‌ ಅವರು ಅಟ್ಲಿ ಜೊತೆ ಸಿನಿಮಾ ಮಾಡುತ್ತಾರೆ ಎಂಬ ಸುದ್ದಿ ಶುರುವಾಗಿದೆ. ಕಾಲಿವುಡ್‌ನ ಖ್ಯಾತ ನಿರ್ದೇಶಕರಾಗಿರುವ ಅಟ್ಲಿ ಅಲ್ಲು ಅರ್ಜುನ್‌ ಅವರಿಗೆ ಕಥೆಯೊಂದನ್ನು ಹೇಳಿದ್ದಾರೆ. ಅಲ್ಲು ಅರ್ಜುನ್‌ ಅವರಿಗೆ ಕಥೆ ತುಂಬಾ ಇಷ್ಟವಾಗಿದೆ. ಇದರಿಂದ ಅವರು ಸಿನಿಮಾಗೆ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರಂತೆ.

ಅಟ್ಲಿ ಅವರು ಶಾರೂಖ್‌ ಖಾನ್‌ ಅವರ ಸಿನಿಮಾ ನಿರ್ದೇಶನದಲ್ಲಿ ಬ್ಯುಸಿ ಆಗಿದ್ದಾರೆ., ಇನ್ನು ಇಲ್ಲಿ ಅಲ್ಲು ಅರ್ಜುನ್‌ ಕೂಡ ತಮ್ಮ ಪುಷ್ಪ ೨ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಇಬ್ಬರು ಅವರ ಪ್ರತ್ಯೇಕ ಪ್ರಾಜೆಕ್ಟ್‌ ಮುಗಿಸಿದ ಬಳಿಕ ಈ ಸಿನಿಮಾಗೆ ಕೈ ಹಾಕಲಿದ್ದಾರೆ ಎಂದು ತಿಳಿದು ಬಂದಿದೆ.

ಪುಷ್ಪ ನಂತರ ಅಲ್ಲು ಅರ್ಜುನ್‌ ಅವರ ವ್ಯಾಲ್ಯೂ ಹೆಚ್ಚಿದೆ.ಹಾಗೆಯೇ ಅವರ ಸಂಭಾವನೆಯೂ ಕೂಡ ಹೆಚ್ಚಾಗಿದೆ. ಹೊಸ ಚಿತ್ರಗಳಿಗೆ ಅಲ್ಲು ಅರ್ಜುನ್‌  100ಕೋಟಿ ರೂ ಸಂಭಾವನೆ ಕೇಳಿದ್ದಾರೆ ಎಂದು ಹೇಳಲಾಗ್ತಿದೆ.

Share Post