Cinema

ಪಂಜಾಬ್‌ ಭಯೋತ್ಪಾದಕ ಕೇಂದ್ರವಾಗ್ತಿದೆ: ಕಂಗನಾ ರಣಾವತ್‌ ಆತಂಕ

ಮುಂಬೈ: ನಿನ್ನೆ ಪಂಜಾಬ್‌ನಲ್ಲಿ ಪ್ರಧಾನಿ ಮೋದಿಗೆ ಭದ್ರತಾ ವೈಫಲ್ಯವಾಗಿದ್ದಕ್ಕೆ ಬಾಲಿವುಡ್‌ ನಟಿ ಕಂಗನಾ ರಣಾವತ್‌ ಆತಂಕ ವ್ಯಕ್ತಪಡಿಸಿದ್ದಾರೆ. ಫ್ಲೈಓವರರ ಮೇಲೆ ಪ್ರಧಾನಿ ನರೇಂದ್ರ ಮೋದಿಯವರನ್ನು ೨೦ ನಿಮಿಷಗಳ ನಿಲ್ಲಿಸಿದ್ದು ಸರಿಯಲ್ಲ. ಇದು ಒಂದು ರೀತಿಯ ಭಯೋತ್ಪಾದನೆ ರೀತಿಯಲ್ಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇನ್ಸ್ಟಾಗ್ರಾಂನಲ್ಲಿ ಪೋಸ್ಟ್‌ ಹಾಕಿರುವ ಕಂಗನಾ, ಪಂಜಾಬ್‌ ರಾಜ್ಯ ಭಯೋತ್ಪಾದಕ ಚಟುವಟಿಕೆಗಳ ತಾಣವಾಗಿ ಮಾರ್ಪಡುತ್ತಿದೆ. ಪ್ರಧಾನಿ ಮೋದಿ ಇಡೀ ದೇಶದ ಧ್ವನಿಯಾಗಿದ್ದಾರೆ. ದೇಶದ ಹೆಮ್ಮೆಯಾಗಿರುವ ಪ್ರಧಾನಿಗೆ ಅಗೌರವ ತೋರಿದ್ದು ನಾಚಿಕೆಗೇಡಿನ ಸಂಗತಿ ಎಂದು ನಟಿ ಕಿಡಿಕಾರಿದ್ದಾರೆ. ಇಂತಹ ಚಟುವಟಿಕೆಗಳ ದೇಶದಲ್ಲಿ ನಿಲ್ಲದಿದ್ದರೆ, ದೇಶ ದೊಡ್ಡ ಬೆಲೆ ತೆರಬೇಕಾದ ಪರಿಸ್ಥಿತಿ ಬರಬಹುದು ಎಂದು ಕಂಗನಾ ಇದೇ ವೇಳೆ ಆತಂಕ ವ್ಯಕ್ತಪಡಿಸಿದ್ದಾರೆ.

 

Share Post