Cinema

ಪ್ರಜ್ವಲ್‌ ದೇವರಾಜ್ ನೂತನ ಸಿನಿಮಾಗೆ ಪನ್ನಾಗಭರಣ ನಿರ್ದೇಶನ

ಬೆಂಗಳೂರು :   ಸ್ಯಾಂಡಲ್‌ವುಡ್‌ ಡೈನಾಮಿಕ್‌ ಪ್ರಿನ್ಸ್‌ ಪ್ರಜ್ವಲ್‌ ದೇವರಾಜ್‌ ಅವರ ಹಿಂದಿನ ಸಿನಿಮಾಗಳಾದ ಅರ್ಜುನ್‌ ಗೌಡ ಮತ್ತು ಇನ್ಸ್‌ಪೆಕ್ಟರ್‌ ವಿಕ್ರಂ ತುಂಬಾ ಸದ್ದು ಮಾಡಿತ್ತು. ಈಗ ಪ್ರಜ್ವಲ್‌ ದೇವರಾಜ್‌ ಮತ್ತೊಂದು ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ.

ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿರುವ ಪ್ರಜ್ವಲ್‌ ಈಗ ಸಾಕಷ್ಟು ಬ್ಯುಸಿ ಇದ್ದಾರೆ. ಇತ್ತೀಚೆಗೆ ನಿರ್ದೇಶಕ ಲೋಹಿತ್‌ ಅವರ ಬ್ಯಾನರ್‌ ಅಡಿಯಲ್ಲಿ ಮಾಫಿಯ ಸಿನಿಮಾ ಒಪ್ಪಿಕೊಂಡಿರುವ ಪ್ರಜ್ವಲ್‌ ಈಗ ಪನ್ನಾಗಭರಣ ನಿರ್ದೇಶನದ ಸಿನಿಮಾವೊಂದಕ್ಕೆ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ.

ಬಂಡಿ ಮಾಕಾಳಮ್ಮ ದೇವಸ್ಥಾನದಲ್ಲಿ ಸರಳವಾಗಿ ಸ್ಕ್ರಿಪ್ಟ್ ಪೂಜೆ ನೆರವೇರಿಸಿ‌ ಕೆಲಸ ಶುರುಮಾಡಿರುವ ತಂಡ, ಬಾಲಿವುಡ್‌ ಅಧೀರ ಭಟ್‌ ಬರೆದಿರುವ ಕಮರ್ಷಿಯಲ್‌ ಅಂಶಗಳನ್ನು ಈ ಚಿತ್ರ ಒಳಗೊಂಡಿದೆ ಎಂದು ಹೇಳಿದ್ದಾರೆ..

ವಾಸುಕಿ ವೈಭವ್‌ ಈ ಸಿನಿಮಾದ ಸಂಗೀತ ಜವಾಬ್ದಾರಿಯನ್ನು ಹೊರಲಿದ್ದಾರೆ. ಹೆಚ್ಚಿನ ಮಾಹಿತಿ ಇನ್ನು ಲಭ್ಯವಾಗ ಬೇಕಿದೆ.

ಇತ್ತೀಚೆಗೆ ಪನ್ನಾಗಭರಣ ಅವರು ಮೇಘನಾ ರಾಜ್‌ ಅವರ ಚಿತ್ರೀಕರಣವೊಂದನ್ನು ಮಾಡಿದ್ದರು.

Share Post