Crime

ದೇವನಹಳ್ಳಿ ಜೋಡಿ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್‌

ದೇವನಹಳ್ಳಿ: ಎರಡು ದಿನದ ಹಿಂದೆ ಬಾಡಿಗೆ ಮನೆಯಲ್ಲಿ ದಂಪತಿ ಎಂದು ಹೇಳಿಕೊಂಡಿದ್ದ ಮಹಿಳೆ ಮತ್ತು ವ್ಯಕ್ತಿಯೊಬ್ಬರ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದೆ. ಒಂದೇ ಸೀರೆಯಲ್ಲಿ ರಾಯಚೂರು ಮೂಲದ ಜ್ಯೋತಿ ಮತ್ತು ಬಸವರಾಜು ನೇಣು ಬಿಗಿದುಕೊಂಡಿದ್ದರು. ಪೊಲೀಸರ ವಿಚಾರಣೆ ವೇಳೆ ಇವರು ದಂಪತಿಯೇ ಅಲ್ಲ ಎಂದು ಗೊತ್ತಾಗಿದೆ.

ಜನವರಿ 17 ರಂದು ದೇವನಹಳ್ಳಿ ನಗರದ ಸೂಲಿಬೆಲೆ ರಸ್ತೆಯ ನಾರಾಯಣಾಚಾರ್‌ ಬಡಾವಣೆಯಲ್ಲಿ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಇಬ್ಬರೂ ದಂಪತಿ ಎಂದು ಹೇಳಿಕೊಂಡು ಹತ್ತು ದಿನದ ಹಿಂದಷ್ಟೇ ಬಾಡಿಗೆ ಮನೆಗೆ ಬಂದಿದ್ದರು ಎನ್ನಲಾಗಿದೆ.

ಅಂದಹಾಗೆ, ಜ್ಯೋತಿಗೆ ಈಗಾಗಲೇ ಮದುವೆಯಾಗಿತ್ತು. ಆರು ವರ್ಷದ ಹಿಂದೆಯೇ ಮದುವೆಯಾಗಿದ್ದ ಜ್ಯೋತಿ ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದರು. ಆದರೆ ಮಗು ಆಗದ ಕಾರಣಕ್ಕೆ ಗಂಡ ದಿನವೂ ಕಿರಿಕಿರಿ ಮಾಡುತ್ತಿದ್ದ. ಈ ನಡುವೆಯೇ ಜ್ಯೋತಿಗೆ ಬಸವರಾಜು ಪರಿಚಯವಾಗಿದ್ದು, ಇಬ್ಬರ ನಡುವೆ ಪ್ರೀತಿ ಉಂಟಾಗಿದೆ. ಹೀಗಾಗಿ ಇಬ್ಬರೂ ಹತ್ತು ದಿನದ ಹಿಂದೆ ಸಂಸಾರ ಹೂಡಿದ್ದರು ಎಂದು ಗೊತ್ತಾಗಿದೆ.

 

Share Post