CinemaNational

ಕಬ್ಜ ಚಿತ್ರಕ್ಕೆ ಶುಭ ಕೋರಿದ ಪವನ್‌ ಕಲ್ಯಾಣ್‌; ಕನ್ನಡದಲ್ಲಿ ಪತ್ರ ಬರೆದ ತೆಲುಗು ಪವರ್‌ ಸ್ಟಾರ್‌

ಹೈದರಾಬಾದ್‌; ಆರ್‌ ಚಂದ್ರು ನಿರ್ದೇಶನದ ಕಬ್ಜಾ ಚಿತ್ರದ ಬಗ್ಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ರಿಲೀಸ್‌ಗೂ ಮೊದಲೇ ಈ ಪ್ಯಾನ್‌ ಇಂಡಿಯಾ ಚಿತ್ರ ಎಲ್ಲೆಡೆ ಸದ್ದು ಮಾಡುತ್ತಿದೆ. ಇದೀಗ ತೆಲುಗಿನ ಪವರ್‌ ಸ್ಟಾರ್‌ ಪವನ್‌ ಕಲ್ಯಾಣ್‌ ಕಬ್ಜಾ ಚಿತ್ರದ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ. ಈ ಬಗ್ಗೆ ನಿರ್ದೇಶಕ ಚಂದ್ರುಗೆ ಪತ್ರ ಕೂಡಾ ಬರೆದಿದ್ದಾರೆ. ಆ ಪತ್ರ ಕನ್ನಡದಲ್ಲಿರುವುದು ವಿಶೇಷ.

ಇತ್ತೀಚೆಗಷ್ಟೇ ಶಿಡ್ಲಘಟ್ಟದಲ್ಲಿ ಕಬ್ಜಾ ಚಿತ್ರದ ಹಾಡೊಂದನ್ನು ರಿಲೀಸ್‌ ಮಾಡಲಾಗಿತ್ತು. ಈ ಕಾರ್ಯಕ್ರಮಕ್ಕೆ ಪವನ್‌ ಕಲ್ಯಾಣ್‌ ಅತಿಥಿಯಾಗಿದ್ದರು. ಆದ್ರೆ ಕಾರಣಾಂತರಗಳಿಂದ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿಲ್ಲ. ಹೀಗಾಗಿ ಅವರು ಚಿತ್ರತಂಡಕ್ಕೆ ಶುಭ ಕೋರಿ ಕನ್ನಡದಲ್ಲೇ ಪತ್ರ ಬರೆದಿದ್ದಾರೆ. ಜನಸೇನಾ ಪಾರ್ಟಿಯ ಲೆಟರ್‌ ಹೆಡ್‌ನಲ್ಲಿ ಈ ಪತ್ರ ರವಾನಿಸಲಾಗಿದೆ.

ಈ ಚಿತ್ರದ ನಾಯಕ ಉಪೇಂದ್ರ ಅವರಿಗೂ, ಸುದೀಪ್ ಅವರಿಗೂ ನನ್ನ ಹಾರ್ದಿಕ ಅಭಿನಂದನೆಗಳು. ಅವರಿಬ್ಬರ ಜೊತೆಗೂ ನನಗೆ ಸಾಕಷ್ಟು ಪರಿಚಯವಿದೆ. ಉಪೇಂದ್ರ ಅವರಾಗಲಿ, ಸುದೀಪ್ ಅವರಾಗಲಿ ತುಂಬಾ ಭಿನ್ನವಾದ ಪಾತ್ರಗಳಲ್ಲಿ ನಟಿಸಿದ್ದಾರೆ. ತಮ್ಮವೇ ಆದ ಹಾಭಾವಗಳಿಂದ ಎಲ್ಲ ಭಾಷೆಯ ಪ್ರೇಕ್ಷಕರ ಮನವನ್ನೂ ಸೂರೆಗೊಂಡಿದ್ದಾರೆ. ಕಬ್ಜಾ ಚಿತ್ರವು ಕನ್ನಡದ ಜೊತೆಗೆ ಎಲ್ಲ ಭಾಷೆಗಳಲ್ಲೂ ವಿಜಯವನ್ನು ಪಡೆಯಬೇಕೆಂದು ಬಯಸುತ್ತೇನೆ ಎಂದು ಪತ್ರದಲ್ಲಿ ಬರೆಯಲಾಗಿದೆ.

Share Post