CinemaNational

ತೆಲುಗಿನ ಗೋಪಿಚಂದ್‌ ಚಿತ್ರಕ್ಕೆ ಕನ್ನಡದ ಹರ್ಷ ನಿರ್ದೇಶಕ

ಮಾಚೊ ಸ್ಟಾರ್ ಗೋಪಿಚಂದ್ ಕಳೆದ ಕೆಲವು ದಿನಗಳಿಂದ ಸರಣಿ ಫ್ಲಾಪ್‌ಗಳನ್ನು ಕಾಣುತ್ತಿದ್ದಾರೆ. ಇತ್ತೀಚೆಗೆ ಶ್ರೀವಾಸ್ ನಿರ್ದೇಶನದ ರಾಮಬಾಣಂ ಚಿತ್ರ ಸೋಲು ಕಂಡಿತ್ತು. ಈ ಹಿಂದೆ ಶ್ರೀವಾಸ್ ಜೊತೆ ಲಕ್ಷ್ಯಂ ಮತ್ತು ಲೌಕ್ಯಂ ಚಿತ್ರಗಳ ಮೂಲಕ ಎರಡು ಹಿಟ್‌ಗಳನ್ನು ಬಾರಿಸಿದ್ದ ಗೋಪಿಚಂದ್ ಈ ಬಾರಿ ಹ್ಯಾಟ್ರಿಕ್ ಸಾಧಿಸುವ ನಿರೀಕ್ಷೆಯಲ್ಲಿದ್ದರು. ಆದರೆ ಅದು ಕೂಡಾ ನಿರಾಸೆ ಮೂಡಿಸಿದೆ.

ರಾಮಬಾಣಂ ಚಿತ್ರವು ಗೋಪಿಚಂದ್ ಅವರ 30 ನೇ ಚಿತ್ರವಾಗಿದ್ದು, ಫಲಿತಾಂಶಗಳು ನಿರೀಕ್ಷೆಗಳನ್ನು ಪೂರೈಸದ ಕಾರಣ, ಮುಂದಿನ ಚಿತ್ರ ಯಾರೊಂದಿಗೆ ಎಂದು ಅವರು ಯೋಚಿಸಿದ್ದಾರೆ. ಇತ್ತೀಚೆಗಷ್ಟೇ ಗೋಪಿಚಂದ್ ಹುಟ್ಟುಹಬ್ಬದ ಸಂದರ್ಭದಲ್ಲಿ ತಮ್ಮ 31ನೇ ಚಿತ್ರದ ಶೀರ್ಷಿಕೆಯನ್ನು ಘೋಷಿಸಿದ್ದರು. ಗೋಪಿಚಂದ್ ಅವರ 31ನೇ ಚಿತ್ರವನ್ನು ಕನ್ನಡದ ಸ್ಟಾರ್ ನಿರ್ದೇಶಕ ಹರ್ಷ ನಿರ್ದೇಶನ ಮಾಡಲಿದ್ದಾರೆ. ಕನ್ನಡದಲ್ಲಿ ಬಜರಂಗಿ, ಬಜರಂಗಿ 2, ವಜ್ರಕಾಯ, ಅಂಜನಿ ಪುತ್ರ… ಮುಂತಾದ ಸೂಪರ್ ಹಿಟ್ ಸಿನಿಮಾಗಳನ್ನು ಹರ್ಷ ನಿರ್ದೇಶನ ಮಾಡಿದ್ದಾರೆ.  ಹರ್ಷ ಇತ್ತೀಚೆಗಷ್ಟೇ ಶಿವರಾಜ್ ಕುಮಾರ್ ಅಭಿನಯದ ವೇದಾ ತೆರೆಗೆ ಬಂದಿತ್ತಾದರೂ ಆ ಸಿನಿಮಾ ಅಷ್ಟೊಂದು ಯಶಸ್ಸು ಕಾಣಲಿಲ್ಲ.

ಗೋಪಿಚಂದ್ ತಮ್ಮ 31ನೇ ಚಿತ್ರಕ್ಕೆ ‘ಭೀಮ’ ಎಂದು ಟೈಟಲ್ ಘೋಷಿಸಿದ್ದಾರೆ. ಶ್ರೀಸತ್ಯ ಸಾಯಿ ಆರ್ಟ್ಸ್ ಪ್ರೊಡಕ್ಷನ್ ಅಡಿಯಲ್ಲಿ ಕೆ ಕೆ ರಾಧಾಮೋಹನ್ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಕೂಡ ರಿಲೀಸ್ ಆಗಿದೆ. ಗೋಪಿಚಂದ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಗೊತ್ತೇ ಇದೆ. ಅಲ್ಲದೇ ಈ ಸಿನಿಮಾ ಇನ್ನಷ್ಟು ಮಾಸ್ ಆಗಲಿದೆ ಎಂಬ ಮಾಹಿತಿಯೂ ಇದೆ. ಈ ಸಿನಿಮಾದ ಮೂಲಕ ಗೋಪಿಚಂದ್ ಹಿಟ್ ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಸದ್ಯದಲ್ಲೇ ಈ ಸಿನಿಮಾದ ಶೂಟಿಂಗ್ ಶುರುವಾಗಲಿದೆ. ಕೆಜಿಎಫ್ ಚಿತ್ರಕ್ಕೆ ಸಂಗೀತ ನೀಡಿರುವ ಸ್ಟಾರ್ ಸಂಗೀತ ನಿರ್ದೇಶಕ ರವಿ ಬಸ್ರೂರು ಈ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ.

Share Post