Cinema

ಸಿಖ್ಖರ ಅವಹೇಳನ: ಪೊಲೀಸರ ಮುಂದೆ ಹಾಜರಾದ ನಟಿ ಕಂಗನಾ ರನೌತ್‌

ಮುಂಬೈ: ಸಿಖ್ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪ ಎದುರಿಸುತ್ತಿರುವ ಬಾಲಿವುಡ್‌ ನಟಿ ಕಂಗನಾ ರನೌತ್‌, ಪೊಲೀಸರ ಮುಂದೆ ಹಾಜರಾಗಿದ್ದಾರೆ. ಖಾರ್‌ ಪೊಲೀಸ್‌ ಠಾಣೆಯ ಪೊಲೀಸರ ಮುಂದೆ ತಮ್ಮ ವಕೀಲರ ಜೊತೆ ಹಾಜರಾದ ಕಂಗನಾ, ಪೊಲೀಸರ ವಿಚಾರಣೆ ಎದುರಿಸಿದರು.  ನಿನ್ನೆಯೇ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಸೂಚನೆ ನೀಡಿದ್ದರು. ಆದರೆ ಕಂಗನಾ, ನಿನ್ನೆ ಪೊಲೀಸ್‌ ಠಾಣೆ ಮುಂದೆ ಹಾಜರಾಗಿರಲಿಲ್ಲ.

ದೆಹಲಿಯಲ್ಲಿ ಪ್ರತಿಭಟನೆ ಮಾಡಿದ ರೈತರು ಖಲಿಸ್ತಾನಿಗಳು ಎಂದು ನಟಿ ಕಂಗನಾ ರನೌತ್‌ ಆರೋಪ ಮಾಡಿದ್ದರು. ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಕಂಗನಾ ಬರೆದುಕೊಂಡಿದ್ದರು. ಇದರ ವಿರುದ್ಧ ಸಿಖ್‌ ಸಂಘಟನೆಯೊಂದು, ದೂರು ನೀಡಿತ್ತು. ಈ ಹಿನ್ನೆಲೆಯಲ್ಲಿ  ಡಿಸೆಂಬರ್ ೧೩ರಂದು ವಿಚಾರಣೆ ನಡೆಸಿದ್ದ ಬಾಂಬೆ ಹೈಕೋರ್ಟ್ ಡಿಸೆಂಬರ್ ೨೨ರಂದು ಪೊಲೀಸರ ಮುಂದೆ ಹಾಜರಾಗಿ ಹೇಳಿಕೆ ದಾಖಲಿಸುವಂತೆ ಸೂಚನೆ ನೀಡಿತ್ತು. ನಾಳೆ ಬಾಂಬೆ ಹೈಕೋರ್ಟ್‌ನಲ್ಲಿ ಮತ್ತೆ ವಿಚಾರಣೆ ಇದೆ.

Share Post