CinemaCrime

ವಂಚನೆ, ಜೀವ ಬೆದರಿಕೆ ಆರೋಪ; ಪತಿ, ಮಾವನ ವಿರುದ್ಧ ನಟಿ ಚೈತ್ರ ಹಳ್ಳಿಕೇರಿ ದೂರು

ಮೈಸೂರು; ಸ್ಯಾಂಡಲ್‌ವುಡ್‌ ನಟಿ ಚೈತ್ರ ಹಳ್ಳಿಕೇರಿ ಅವರು ತಮ್ಮ ಪತಿ ಹಾಗೂ ಮಾವನ ವಿರುದ್ಧ ಮೈಸೂರು ಜಯಲಕ್ಷ್ಮಿಪುರಂ ಪೊಲೀಸ್‌ ಠಾಣೆಯಲ್ಲಿ ವಂಚನೆ ಹಾಗೂ ಜೀವ ಬೆದರಿಕೆ ದೂರು ದಾಖಲಿಸಿದ್ದಾರೆ. ತನ್ನ ಅನುಮತಿಯಿಲ್ಲದೆ ಗೋಲ್ಡ್‌ ಪಡೆದಿದ್ದು, ಬ್ಯಾಂಕ್‌ ಖಾತೆ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಚೈತ್ರ ಹಳ್ಳಿಕೇರಿ ಆರೋಪಿಸಿದ್ದಾರೆ.

    ಈ ಸಂಬಂಧ ಚೈತ್ರ ಹಳ್ಳಿಕೇರಿ ಅವರು, ಪತಿ ಬಾಲಾಜಿ, ಮಾವ ಪೋತರಾಜ್‌ ಹಾಗೂ ಸೌತ್‌ ಇಂಡಿಯನ್‌ ಬ್ಯಾಮಕ್‌ ಮ್ಯಾನೇಜರ್‌ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಚೈತ್ರ ಹಳ್ಳಿಕೇರಿ ಅವರು ಗುರು ಶಿಷ್ಯ, ಶ್ರೀ ದಾನಮ್ಮ ದೇವಿ ಚಿತ್ರದ‌ಲ್ಲಿ ನಟಿಸಿದ್ದಾರೆ. ಈ ಹಿಂದೆ ಕೂಡಾ ಚೈತ್ರ ತಮ್ಮ ಮಾವನ ವಿರುದ್ಧ ದೂರು ಕೊಟ್ಟಿದ್ದರು.

Share Post