CinemaNational

ತೆರೆಗೆ ಬರಲಿದೆ ʻಜೈ ಹನುಮಾನ್‌ʼ ಸಿನಿಮಾ; ಹನುಮಂತನಾಗಿ ಚಿರಂಜೀವಿ, ರಾಮನಾಗಿ ಮಹೇಶ್‌ ಬಾಬು..?

ಹೈದರಾಬಾದ್‌; ತೇಜ ಸಜ್ಜಾ ನಟನೆಯ ‘ಹನುಮಾನ್​’ ಚಿತ್ರ ಸೂಪರ್‌ ಹಿಟ್‌ ಆಗಿದ್ದು ಎಲ್ಲರಿಗೂ ಗೊತ್ತೇ ಇದೆ,. ಇದೀಗ ಇದರ ಸೀಕ್ವೆಲ್‌ ತೆಗೆಯಲು ಚಿಂತನೆ ನಡೆದಿದೆ, ಅದಕ್ಕೆ ʻಜೈ ಹನುಮಾನ್‌ʼ ಎಂದು ಹೆಸರಿಡಲಾಗಿದೆ. ಈ ಚಿತ್ರದಲ್ಲಿ ಹನುಮಂತನಾಗಿ ಚಿರಂಜೀವಿ ಹಾಗೂ ರಾಮನಾಗಿ ಮಹೇಶ್‌ ಬಾಬು ನಟಿಸುತ್ತಾರೆ ಎಂದು ಹೇಳಲಾಗುತ್ತಿದೆ. ಮಹೇಶ್‌ ಬಾಬು ಹಾಗೂ ಚಿರಂಜೀವಿ ನಟಿಸಿದರೆ ಪಾತ್ರಗಳಿಗೆ ತೂಕ ಬರುತ್ತದೆ ಎಂದು ನಿರ್ದೇಶಕ ಪ್ರಶಾಂತ್‌ ವರ್ಮಾ ಹೇಳಿದ್ದು, ನಟರನ್ನು ಒಪ್ಪಿಸುವ ಪ್ರಯತ್ನ ನಡೆದಿದೆ ಎಂದು ಹೇಳಲಾಗುತ್ತಿದೆ.

ಹನುಮಾನ್‌ ಸಿನಿಮಾದಲ್ಲಿ ಹಳ್ಳಿ ಹುಡುಗನೊಬ್ಬ ಆಂಜನೇಯನ ಕೃಪೆಯಿಂದ ಸೂಪರ್‌ ಪವರ್‌ ಪಡೆಯುತ್ತಾನೆ. ಅದರ ಮುಂದುವರೆದ ಕಥೆಯೇ ಜೈ ಹನುಮಾನ್‌ ಎಂದು ತಿಳಿದುಬಂದಿದೆ. ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ನಿರ್ದೇಶಕ ಪ್ರಶಾಂತ್‌ ವರ್ಮಾ ಮಾತನಾಡಿದ್ದು, ಮಹೇಶ್‌ ಬಾಬು ಅವರು ಶ್ರೀರಾಮನ ಪಾತ್ರದಲ್ಲಿ ಹಾಗೂ ಆಂಜನೇಯ ಪಾತ್ರದಲ್ಲಿ ಚಿರಂಜೀವಿಯವರು ನಟಿಸಿದರೆ ಚೆನ್ನಾಗಿರುತ್ತದೆ ಎಂದು ಹೇಳಿದ್ದಾರೆ. ಇಬ್ಬರೂ ನಟರು ಇದಕ್ಕೆ ಒಪ್ಪಿಕೊಂಡರೆ ಚಿತ್ರಕ್ಕೆ ತೂಕ ಬರುತ್ತದೆ ಎಂದು ಹೇಳಿದ್ದಾರೆ.

 

Share Post