CinemaCrime

ಕನ್ನಡದ ಖ್ಯಾತ ನಟ ರಕ್ಷಿತ್‌ ಶೆಟ್ಟಿ ವಿರುದ್ಧ ದೂರು ದಾಖಲು!

ಬೆಂಗಳೂರು; ಕಾಪಿರೈಟ್‌ ಉಲ್ಲಂಘನೆ ಮಾಡಿದ್ದಾರೆ ಎಂದು ನವೀನ್‌ ಎಂಬುವವರು ಖ್ಯಾತ ನಟ ರಕ್ಷಿತ್‌ ಶೆಟ್ಟಿ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.. ಎರಡು ಚಿತ್ರದ ಹಾಡುಗಳನ್ನು ನಮ್ಮ ಅನುಮತಿ ಇಲ್ಲದೆ ತಮ್ಮ ಚಿತ್ರದಲ್ಲಿ ಬಳಸಿದ್ದಾರೆ ಎಂದು ಆರೋಪ ಮಾಡಿ ನವೀನ್‌ ಅವರು ಯಶವಂತಪುರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.. ಪೊಲೀಸರು ರಕ್ಷಿತ್ ಶೆಟ್ಟಿಗೆ ಕರೆ ಮಾಡಿ ವಿಚಾರಣೆಗೆ ಹಾಜರಾಗುವಂತೆಯೂ ಸೂಚನೆ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.. ಈ ಸಿನಿಮಾವನ್ನು ರಕ್ಷಿತ್‌ ಶೆಟ್ಟಿ ನಿರ್ಮಾಣ ಮಾಡಿದ್ದಾರೆ.

ಇದನ್ನೂ ಓದಿ; ಮಹಿಳೆಯ ಮೂಗಲ್ಲಿ ರಕ್ತ, ಬಾಯಲ್ಲಿ ನೊರೆ, ಕ್ಷಣಾರ್ಧದಲ್ಲಿ ಸಾವು!; ಏನಿದು ವಿಚಿತ್ರ

ಎಂಅರ್‌ಟಿ ಮ್ಯೂಸಿಕ್‌ ಪಾಲುದಾರರಾಗಿರುವ ನವೀನ್‌ ಕುಮಾರ್‌ ಅವರು ಈ ಆರೋಪ ಮಾಡಿದ್ದಾರೆ.. ನ್ಯಾಯ ಎಲ್ಲಿದೆ..? ಹಾಗೂ ಗಾಳಿ ಮಾತು ಚಿತ್ರದ ಹಾಡುಗಳನ್ನು ಬ್ಯಾಚುಲರ್‌ ಪಾರ್ಟಿ ಚಿತ್ರದಲ್ಲಿ ಅಕ್ರಮವಾಗಿ ಬಳಸಿಕೊಳ್ಳಲಾಗಿದೆ ಅನ್ನೋದು ಆರೋಪ. 2014ರ ಮಾರ್ಚ್‌ನಲ್ಲಿ ಈ ಚಿತ್ರ ತೆರಕಂಡಿತ್ತು.. 2024ರ ಜನವರಿಯಲ್ಲಿ ಚಿತ್ರದ ಹಾಡುಗಳ ಬಳಕೆ ಬಗ್ಗೆ ಮಾತುಕತೆ ನಡೆದಿತ್ತು.. ಆದ್ರೆ ನಾವು ಯಾವುದೇ ತೀರ್ಮಾನಕ್ಕೆ ಬಂದಿರಲಿಲ್ಲ.. ಆದರೂ ಕೂಡಾ ತಮ್ಮ ಚಿತ್ರದಲ್ಲಿ ಹಾಡುಗಳನ್ನು ಅಕ್ರಮವಾಗಿ ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ..
ಹಕ್ಕುಸ್ವಾಮ್ಯ ಇದ್ದು, ಅನುಮತಿ ಪಡೆಯದೇ ಹಾಡುಗಳನ್ನು ಬಳಸಲಾಗಿದ್ದು, ರಕ್ಷಿತ್‌ ಶೆಟ್ಟಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಈ ದೂರಿನಲ್ಲಿ ಮನವಿ ಮಾಡಲಾಗಿದೆ..

ಇದನ್ನೂ ಓದಿ; ದಕ್ಷಿಣ ಕನ್ನಡದ ಕುತ್ತಾರು ಕೊರಗಜ್ಜನ ಕ್ಷೇತ್ರಕ್ಕೆ ಕತ್ರಿನಾ ಕೈಫ್‌ ಭೇಟಿ

Share Post