CinemaLifestyle

ದರ್ಶನ್‌ ಬಿಡುಗಡೆಯಾಗಿ ಕೊಲ್ಲೂರಿನಲ್ಲಿ ವಿಜಯಲಕ್ಷ್ಮಿ ಅವರಿಂದ ನವಚಂಡಿಕಾ ಯಾಗ!

ಬೆಂಗಳೂರು; ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ ಅವರನ್ನು ಬಿಡುಗಡೆ ಮಾಡಿಸಲು ಅವರ ಪತ್ನಿ ವಿಜಯಲಕ್ಷ್ಮೀಯವರು ಶತ ಪ್ರಯತ್ನ ಮಾಡುತ್ತಿದ್ದಾರೆ.. ಒಂದು ಕಡೆ ಕಾನೂನು ಪಂಡಿತರ ಮೂಲಕ ಬೇಲ್‌ ಕೊಡಿಸಲು ಯತ್ನಿಸುತ್ತಿದ್ದಾರೆ.. ಜೊತೆಗೆ ರಾಜಕಾರಣಿಗಳನ್ನೂ ಭೇಟಿಯಾಗುತ್ತಿದ್ದಾರೆ.. ಇದರ ನಡುವೆ ಅವರು ದೇವರ ಮೊರೆ ಕೂಡಾ ಹೋಗಿದ್ದಾರೆ.. ನಿನ್ನೆಯೇ ವಿಜಯಲಕ್ಷ್ಮೀಯವರು ಕೊಲ್ಲೂರಿಗೆ ಭೇಟಿ ನೀಡಿದ್ದಾರೆ.. ಇಂದು ಕೊಲ್ಲೂರಿನಲ್ಲಿ ನವಚಂಡಿಕಾ ಯಾಗ ನಡೆಸಲಿದ್ದು, ದರ್ಶನ್‌ ಬಿಡುಗಡೆಗೆ ದೇವರಲ್ಲಿ ಪ್ರಾರ್ಥನೆ ಮಾಡಲಿದ್ದಾರೆ..

ಇದನ್ನೂ ಓದಿ; ತುಪ್ಪ ಅಸಲಿಯೋ, ನಕಲಿಯೋ ಎಂದು ತಿಳಿಯುವುದು ಹೇಗೆ..?

ಈಗಾಗಲೇ ಕೊಲ್ಲೂರು ಮೂಕಾಂಬಿಕಾ ದೇವಾಲಯದಲ್ಲಿ ಚಂಡಿಕಾ ಹೋಮ ಶುರುವಾಗಿದ್ದು, ಸಂಕಲ್ಪ ಹಾಗೂ ಪಾರಾಯಣ ಕೂಡಾ ನಡೆಯಲಿದೆ.. ಶರತ್‌ ಗೌರೀಶ್‌ ಗುರೂಜಿ ನೇತೃತ್ವದಲ್ಲಿ ಚಂಡಿಕಾ ಪಾರಾಯಾಣ ಮತ್ತು ಚಂಡಿಕಾ ಹೋಮ ನಡೆಸಲಾಗುತ್ತದೆ.. ಜೀವನದಲ್ಲಿ ಸಂಕಷ್ಟ ಎದುರಾದಾಗ, ಶತ್ರುಗಳ ಕಾಟ ಹೆಚ್ಚಾದಾಗ ಈ ಯಾಗ ನಡೆಸಲಾಗುತ್ತದೆ.. ಈ ವೇಳೆ ಮಹಾಕಾಳಿ, ಮಹಾಲಕ್ಷ್ಮೀ ಹಾಗೂ ಮಹಾಸರಸ್ವತಿಯರ ಆರಾಧನೆ ನಡೆಯುತ್ತದೆ.. ಸಪ್ತಸತಿ ಪಾರಾಯಣ ನಡೆಯಲಿದ್ದು, ಇದ್ರಲ್ಲಿ 700 ಶ್ಲೋಕಗಳ ಪಾರಾಯಣ ನಡೆಸಲಾಗುತ್ತದೆ..

ಇದನ್ನೂ ಓದಿ; ಬಿಜೆಪಿ ಮೇಯರ್‌ ವಿರುದ್ಧ ಅತ್ಯಾಚಾರ ದೂರು ದಾಖಲಿಸಿದ ಮಹಿಳೆ!

Share Post