Cinema

ಸಿನಿಮಾ ರಂಗದ ಸಮಸ್ಯೆಗಳನ್ನು ಜಗನ್‌ ಮುಂದಿಟ್ಟ ಚಿರಂಜೀವಿ

ಆಂಧ್ರಪ್ರದೇಶ: ಮುಖ್ಯಮಂತ್ರಿ ವೈ.ಎಸ್.ಜಗನ್‌ ಮೋಹನ್‌ ರೆಡ್ಡಿಯವರನ್ನು ಮೆಗಾಸ್ಟಾರ್‌ ಚಿರಂಜೀವಿ ಗುರುವಾರ ಭೇಟಿ ಮಾಡಿ. ಟಾಲಿವುಡ್‌ ಸಮಸ್ಯೆಗಳ ಬಗ್ಗೆ ಕೂಲಂಕುಷವಾಗಿ ವಿವರಣೆಯನ್ನು ನೀಡಿದ್ರು.
ಬೆಳಗ್ಗೆ ಹೈದರಾಬಾದ್‌ನಿಂದ ವಿಜಯವಾಡಕ್ಕೆ ತೆರಳಿ ಅಲ್ಲಿಂದ ತಾಡಪಲ್ಲಿ ಕ್ಯಾಂಪ್‌ ಆಫೀಸಿನಲ್ಲಿರುವ ಜಗನ್‌ ಮನೆಗೆ ಚಿರಂಜೀವಿ ಭೇಟಿ ನೀಡಿದ್ರು. ಚಿರಂಜೀವಿ ಭೇಟಿ ನೀಡ್ತಿದ್ದಂತೆ ಆದರ ಆತಿಥ್ಯಗಳಿಂದ ಬರಮಾಡಿಕೊಂಡ ಸಿಎಂ ಇಂಡಸ್ಟ್ರಿ ಸಮಸ್ಯೆಗಳ ಬಗ್ಗೆ ಚರ್ಚೆಯಲ್ಲಿ ತೊಡಗಿದ್ರು. ಥಿಯೇಟರ್‌, ಟಿಕೆಟ್‌ ದರ ಪರಿಷ್ಕರಣೆ, ಕೊರೊನಾ ಸಂದರ್ಭದಲ್ಲಿ ಸಿನಿಮಾ ಷೋಗಳಿಗೆ ವಿಧಿಸಿರುವ ನಿರ್ಬಂಧ, ೫೦-೫೦ ರೂಲ್ಸ್‌, ಸಿನಿಮಾ ರಂಗ ಮತ್ತು ಸರ್ಕಾರದ ನಡುವೆ ಇರುವ ಬಿಕ್ಕಟ್ಟು ಮುಂತಾದವುಗಳ ಬಗ್ಗೆ ಸಮಾಲೋಚನೆ ನಡೆಸಿದ್ರು.
ಇನ್ನೂ ಇವರಿಬ್ಬರ ಭೇಟಿ ಬಗ್ಗೆ ಮಾತನಾಡಿದ ಕಿಂಗ್‌ ನಾಗಾರ್ಜುನ, ನಮ್ಮ ಸಮಸ್ಯೆಗಳ ಬಗ್ಗೆ ಮಾತನಾಡೋದಕ್ಕೆ ಚಿರಂಜೀವಿ ಸಿಎಂ ಅವರನ್ನು ಭೇಟಿ ಮಾಡಿದ್ದಾರೆ. ಇಂಡಸ್ಟ್ರಿಯಲ್ಲಿರುವ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತಾರೆ ಎಂಬ ಆಶಾಭಾವನೆಯನ್ನು ತಿಳಿಸಿದ್ರು. ಸಂಕ್ರಾಂತಿ ಹಬ್ಬಕ್ಕೆ ಬಂಗಾರ್ರಾಜು ಸಿನಿಮಾ ತೆರೆಗೆ ಬರಲಿರುವ ಕಾರಣ ಸಾಕಷ್ಟು ಕೆಲಸ ಕಾರ್ಯಗಳಿರುವುದರಿಂದ ನಾನು ತೆರಳಲು ಸಾಧ್ಯವಾಗಿಲ್ಲ ಎಂದು ವಿವರಿಸಿದ್ದಾರೆ. ಈ ಹಿಂದೆ ಸಿನಿಮಾ ಟಿಕೆಟ್‌ ದರ ನಿಗದಿಗೆ ಬೆಂಬಲ ನೀಡಿದ್ದಕ್ಕೆ ಅಭಿಮಾನಿಗಳು ಹಾಗೂ ನಾಯಕರ ನಟರ ಬೇಸರಕ್ಕೆ ನಾಗಾರ್ಜುನ ಒಳಗಾಗಿದ್ದರು.

Share Post