BengaluruPolitics

ಜನವರಿ 11ರಿಂದ ಕಾಂಗ್ರೆಸ್‌ ಬಸ್‌ ಯಾತ್ರೆ; ರೂಪುರೇಷೆ ಬಗ್ಗೆ ಚರ್ಚೆ

ಬೆಂಗಳೂರು; ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ ಸಕಲ ತಯಾರಿ ನಡೆಸುತ್ತಿದೆ. ಬಸ್‌ ಯಾತ್ರೆ ಮೂಲಕ ಜನರನ್ನು ತಲುಪಲು ಕಾಂಗ್ರೆಸ್‌ ನಾಯಕರು ನಿರ್ಧರಿಸಿದ್ದಾರೆ. ಜನವರಿ 11 ರಿಂದ ಬೆಳಗಾವಿಯಿಂದ ಈ ಯಾತ್ರೆ ಶುರುವಾಗಲಿದೆ. ಇದರ ರೂಪುರೇಷೆ ಸಿದ್ಧಪಡಿಸಲು ಇಂದು ಬೆಂಗಳೂರಿನಲ್ಲಿ ಸಭೆ ಕರೆಯಲಾಗಿತ್ತು.

ಖಾಸಗಿ ಹೋಟೆಲ್‌ನಲ್ಲಿ ನಡೆದ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ವಿಪಕ್ಷನಾಯಕ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್‌ ಸೇರಿದಂತೆ ಹಲವು ನಾಯಕರು ಪಾಲ್ಗೊಂಡಿದ್ದರು. ಬಸ್ ಯಾತ್ರೆ ವೇಳೆ ಸ್ಥಳಿಯ ಶಾಸಕರ ಬೆಂಬಲ ಹೆಚ್ಚಿರಬೇಕು. ಯಾತ್ರೆ ವೇಳೆ ಯಾವುದೇ ರೀತಿ ಸಮಸ್ಯೆಗಳು ಉಂಟಾಗದಂತೆ ನೋಡಿಕೊಳ್ಳಬೇಕು. ಬಸ್ ಯಾತ್ರೆ ಬಂದ ಸ್ಥಳದ ವ್ಯಾಪ್ತಿಗೆ ಬರುವ ಜಿಲ್ಲಾಧ್ಯಕ್ಷರು, ಬ್ಲಾಕ್ ಅಧ್ಯಕ್ಷರು, ಶಾಸಕರು ಕಡ್ಡಾವಾಗಿ ಇರಲೇಬೇಕು ಎಂದು ಸೂಚಿಸಲಾಯಿತು.

Share Post