BengaluruCinemaCrime

ಪವಿತ್ರಾಗೌಡಗೆ ಆ ಫೋಟೋ ಕಳುಹಿಸಿದ್ದನಾ ರೇಣುಕಾಸ್ವಾಮಿ..?; ಕೊಲೆಗೆ ಆ ಮೆಸೇಜ್‌ ಕಾರಣವಾಯ್ತಾ..?

ಬೆಂಗಳೂರು; ಚಿತ್ರದುರ್ಗದ ದರ್ಶನ್‌ ಅಭಿಮಾನಿ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಚುರುಕುಗೊಂಡಿದೆ.. ನಟ ದರ್ಶನ್‌, ಪವಿತ್ರಾಗೌಡ ಸೇರಿ 13 ಆರೋಪಿಗಳು ಪೊಲೀಸ್‌ ಕಸ್ಟಡಿಯಲ್ಲಿದ್ದು, ಆರು ದಿನಗಳ ಕಾಲ ವಿಚಾರಣೆ ಎದುರಿಸಲಿದ್ದಾರೆ.. ಇಂದು ಸ್ಥಳ ಮಹಜರು ನಡೆಸುವ ಸಾಧ್ಯತೆ ಇದೆ.. ಇನ್ನು ಈ ನಡುವೆ ರೇಣುಕಾಸ್ವಾಮಿ ಕಳುಹಿಸಿದ ಮೆಸೇಜ್‌ ಬಗ್ಗೆ ಚರ್ಚೆಗಳು ನಡೆಯುತ್ತಿವೆ.. ಪ್ರತಿಷ್ಠಿತ ಮಾಧ್ಯಮವೊಂದರ ಸುದ್ದಿ ಪ್ರಕಾರ, ಕೊಲೆಯಾದ ರೇಣಕಾಸ್ವಾಮಿ ಫೆಬ್ರವರಿ 27ರಿಂದ ನಟಿ ಪವಿತ್ರಾಗೌಡಗೆ ಅಶ್ಲೀಲ ಮೆಸೇಜ್‌ಗಳನ್ನು ಕಳುಹಿಸುತ್ತಿದ್ದನಂತೆ.. ಅಲ್ಲದೆ ಕಳೆದ ಶುಕ್ರವಾರದಂದು ತನ್ನ ಖಾಸಗಿ ಅಂಗದ ಫೋಟೋ ಕಳುಹಿಸಿ ʻದರ್ಶನ್‌ಗಿಂದ ನಾನೇನು ಕಡಿಮೆ ಬಾʼ ಎಂದಿದ್ದ ಎನ್ನಲಾಗಿದೆ.. ಈ ಕಾರಣಕ್ಕಾಗಿಯೇ ಈ ಕೊಲೆ ನಡೆದಿದ ಎಂದು ಹೇಳಲಾಗುತ್ತಿದೆ..

ಪವಿತ್ರಾಗೌಡ ಹಾಗೂ ವಿಜಯಲಕ್ಷ್ಮೀ ನಡುವೆ ಕಿರಿಕ್‌ ಆಗಿತ್ತು.. ಸೋಷಿಯಲ್‌ ಮೀಡಿಯಾದಲ್ಲೇ ಇಬ್ಬರೂ ಕಿತ್ತಾಡಿಕೊಂಡಿದ್ದರು.. ಈ ಕಾರಣಕ್ಕಾಗಿ ದರ್ಶನ್‌ ಹಾಗೂ ವಿಜಯಲಕ್ಷ್ಮೀ ದಾಂಪತ್ಯ ಚೆನ್ನಾಗಿರಬೇಕೆಂದು ಬಯಸಿದ ರೇಣುಕಾಸ್ವಾಮಿ, ಪವಿತ್ರಾಗೌಡಗೆ ಅಶ್ಲೀಲ ಮೆಸೇಜ್‌ಗಳನ್ನು ಕಳುಹಿಸುತ್ತಿದ್ದ ಎಂದು ತಿಳಿದುಬಂದಿದೆ.. ಪವಿತ್ರಾ ಗೌಡ ಅವನ ಅಕೌಂಟ್‌ ಬ್ಲಾಕ್‌ ಮಾಡಿದಾಗ, ಮತ್ತೊಂದು ಫೇಕ್‌ ಅಕೌಂಟ್‌ ಕ್ರಿಯೇಟ್‌ ಮಾಡಿ ಅದರಿಂದ ಈ ರೀತಿಯ ಮೆಸೇಜ್‌ಗಳನ್ನು ಮಾಡುತ್ತಿದ್ದ ಎಂದು ಹೇಳಲಾಗುತ್ತಿದೆ.. ಅದೇ ಫೇಕ್‌ ಅಕೌಂಟ್‌ನಿಂದ ಕಳೆದ ಶುಕ್ರವಾರ ಖಾಸಗಿ ಅಂಗದ ಫೋಟೋ ಕಳುಹಿಸಲಾಗಿತ್ತು ಎನ್ನಲಾಗಿದೆ..

ಆ ಫೇಕ್‌ ಅಕೌಂಡ್‌ ರೇಣುಕಾಸ್ವಾಮಿಯದ್ದೋ, ಅಥವಾ ಬೇರೆಯವರದ್ದೋ ಗೊತ್ತಿಲ್ಲ.. ರೇಣುಕಾಸ್ವಾಮಿಯೇ ಕಳುಹಿಸಿರಬಹುದೆಂದು ಆತನನ್ನು ಕಿಡ್ನ್ಯಾಪ್‌ ಮಾಡಿ ತಂದು ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ.. ರೇಣುಕಾಸ್ವಾಮಿಯ ಮರ್ಮಾಂಗಕ್ಕೆ ಹೆಚ್ಚಿನ ಗಾಯವಾಗಿದೆ ಎಂದು ತಿಳಿದುಬಂದಿದೆ..

 

Share Post