BengaluruPolitics

ಆರ್‌.ಅಶೋಕ್‌ ವಿರುದ್ಧ ಸ್ಪರ್ಧೆ ಮಾಡ್ತಾರಾ ರಮ್ಯಾ..?; ಏನಿದು ಕಾಂಗ್ರೆಸ್‌ ಪ್ಲ್ಯಾನ್‌..?

ಬೆಂಗಳೂರು; ಲೋಕಸಭಾ ಚುನಾವಣೆ ನಂತರ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ರಾಜಕಾರಣದಿಂದ ದೂರವೇ ಉಳಿದಿದ್ದಾರೆ. ಆದ್ರೆ ಇದೀಗ ಅವರು ರಾಜ್ಯ ರಾಜಕಾರಣಕ್ಕೆ ಬರುತ್ತಾರೆಂಬ ಸುದ್ದಿ ಹರಿದಾಡುತ್ತಿದೆ. ಅದೂ ಕೂಡಾ ಪದ್ಮನಾಭನಗರ ಕ್ಷೇತ್ರದಿಂದ ಆರ್‌.ಅಶೋಕ್‌ ವಿರುದ್ಧ ರಮ್ಯಾರನ್ನು ಅಖಾಡಕ್ಕಿಳಿಸಲು ಕಾಂಗ್ರೆಸ್‌ ಹೈಕಮಾಂಡ್‌ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ.

ಎಐಸಿಸಿಯಲ್ಲಿ ಇಂತಹದ್ದೊಂದು ಚರ್ಚೆ ನಡೆದಿದೆ. ರಮ್ಯಾ ಅವರ ಹೆಸರು ಮೂರು ಕ್ಷೇತ್ರಗಳಿಗೆ ಪ್ರಸ್ತಾಪವಾಗಿದ್ದು, ಅದ್ರಲ್ಲಿ ಪದ್ಮನಾಭನಗರ ಮೊದಲ ಆದ್ಯತೆ ಎಂದು ತಿಳಿದುಬಂದಿದೆ. ಈ ಬಗ್ಗೆ ಎಐಸಿಸಿ ನಾಯಕರು ಗಂಭೀರ ಚರ್ಚೆ ನಡೆಸಿದ್ದಾರಂತೆ. ಮಂಡ್ಯ ಕ್ಷೇತ್ರ ಎರಡನೇ ಆದ್ಯತೆ. ಮೂರನೆಯದಾಗಿ ಚನ್ನಪಟ್ಟಣದಲ್ಲಿ ಕಣಕ್ಕಿಳಿಸುವ ಬಗ್ಗೆಯೂ ಚರ್ಚೆ ನಡೆದಿದೆ. ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ವಿರುದ್ಧ ರಮ್ಯಾ ಸ್ಪರ್ಧಿಸುವ ಸಾಧ್ಯತೆ ಬಗ್ಗೆ ಚರ್ಚೆ ನಡೆದಿದೆ.

ಇಂದು ಸಂಜೆ ಬೆಂಗಳೂರಿನ ಮುಖಂಡರು ಪದ್ಮನಾಭನಗರ ಕ್ಷೇತ್ರದ ಅಭ್ಯರ್ಥಿ ವಿಚಾರವಾಗಿ ಸಭೆ ನಡೆಸುತ್ತಿದ್ದಾರೆ. ಈ ಸಭೆಯಲ್ಲಿ ರಮ್ಯಾ ಕೂಡಾ ಭಾಗವಹಿಸುತ್ತಾರೆ ಎಂದು ಹೇಳಲಾಗುತ್ತಿದೆ.

Share Post