BengaluruCinema

ಉರಿಗೌಡ, ನಂಜೇಗೌಡ ಚಿತ್ರ ನಿರ್ಮಾಣ ವಿಚಾರ; ಅಖಾಡಕ್ಕಿಳಿದ ಒಕ್ಕಲಿಗರ ಸಂಘ

ಬೆಂಗಳೂರು; ಮುನಿರತ್ನ ಅವರು ಉರಿಗೌಡ-ನಂಜೇಗೌಡ ಚಿತ್ರದ ಟೈಟಲ್‌ಗಾಗಿ ವಾಣಿಜ್ಯ ಮಂಡಳಿಗೆ ಅರ್ಜಿ ಸಲ್ಲಿಸಿದ್ದಾರೆ. ಇದರಿಂದಾಗಿ ಈ ವಿಚಾರದ ಚರ್ಚೆ ತಾರಕಕ್ಕೇರಿದೆ. ಮುನಿರತ್ನ ಅವರ ಪತ್ರವನ್ನು ಮುಂದಿಟ್ಟುಕೊಂಡೇ ಮಾಜಿ ಸಿಎಂ ಹೆಚ್ಡಿಕೆ ವಾಗ್ದಾಳಿ ನಡೆಸಿದ್ದರು. ಈ ಬೆನ್ನಲ್ಲೇ ಒಕ್ಕಲಿಗರ ಸಂಘ ಕೂಡ ಈ ವಿಚಾರದಲ್ಲಿ ಎಂಟ್ರಿಯಾಗಿದೆ.

ಒಕ್ಕಲಿಗ ಯುವಬ್ರಿಗೆಡ್ ಹಾಗೂ ಒಕ್ಕಲಿಗ ಅನಿವಾಸಿ ಭಾರತೀಯ ಯುವಬ್ರಿಗೆಡ್ ಅಧ್ಯಕ್ಷ ನಂಜೇಗೌಡ ನಂಜುಂಡಿ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದಾರೆ. ಉರಿಗೌಡ-ನಂಜೇಗೌಡ ಹೆಸರಲ್ಲಿ ಸಿನಿಮಾ ಮಾಡದಂತೆ ನಿರ್ಮಾಪಕ ಮುನಿರತ್ನಗೆ ಸೂಚಿಸಬೇಕು ಅಂತ ಆಗ್ರಹಿಸಲಾಗಿದೆ. ಆ ಟೈಟಲ್‌ಗೆ ಅನುಮತಿ ನೀಡದಂತೆಯೂ ಮನವಿ ಮಾಡಿಕೊಳ್ಳಲಾಗಿದೆ.

‘ಉರೀಗೌಡ, ನಂಜೇಗೌಡರ ಬಗ್ಗೆ ಯಾವುದೇ ದಾಖಲೆಗಳಿಲ್ಲ. ಇತಿಹಾಸದಲ್ಲೂ ಅವರ ಬಗ್ಗೆ ಉಲ್ಲೇಖವಿಲ್ಲ. ಆದ್ರೆ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಒಕ್ಕಲಿಗ ಸಮುದಾಯವನ್ನು ಅಪಮಾನ ಮಾಡಲು ಹೊರಟಿದ್ದಾರೆ. ಮುಸ್ಲಿಂ ಹಾಗೂ ಒಕ್ಕಲಿಗರ ನಡುವೆ ಧರ್ಮ ಸಂ‍ಘರ್ಷವನ್ನು ತಂದಿಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

Share Post