CinemaNational

ಆಸ್ಕರ್‌ ಪ್ರಶಸ್ತಿ ಬಂದ ಹಿನ್ನೆಲೆ; ಅಮಿತ್‌ ಶಾ ಭೇಟಿಯಾದ ಚಿರು, ರಾಮ್‌ಚರಣ್‌

ಬೆಂಗಳೂರು;  ಆರ್.ಆರ್.ಆರ್ ಸಿನಿಮಾದ ‘ನಾಟು ನಾಟು’ ಹಾಡಿಗೆ ಆಸ್ಕರ್  ಪ್ರಶಸ್ತಿ ಬಂದಿದೆ. ಪ್ರಶಸ್ತಿ ಪಡೆದುಕೊಂಡು ನಿನ್ನೆಯಷ್ಟೇ ರಾಮ್‌ಚರಣ್‌ ಭಾರತಕ್ಕೆ ಬಂದಿದ್ದರು. ಅವರ ಮೊದಲಿಗೆ ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರನ್ನು ಭೇಟಿಯಾಗಿದ್ದಾರೆ. ತಂದೆ ಚಿರಂಜೀವಿ ಜೊತೆ ರಾಮ್‌ ಚರಣ್‌ ಅಮಿತ್‌ ಷಾರನ್ನು ಭೇಟಿಯಾಗಿದ್ದಾರೆ.

ಚಿರಂಜೀವಿ ಸಹೋದರ ಪವನ್‌ ಕಲ್ಯಾಣ್‌ ಜನಸೇನಾ ಎಂಬ ಪಾರ್ಟಿ ಕಟ್ಟಿದ್ದಾರೆ. ಈ ನಡುವೆ ಚಿರಂಜೀವಿ ಅಮಿತ್‌ ಶಾ ಭೇಟಿಯಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ. ಇದು ರಾಜಕೀಯ ಉದ್ದೇಶದ ಭೇಟಿಯಾ ಎಂಬುದರ ಬಗ್ಗೆಯೂ ಅನುಮಾನ ಮೂಡಿದೆ. ಆಸ್ಕರ್ ಪ್ರಶಸ್ತಿ ಪಡೆದದ್ದಕ್ಕಾಗಿ ಅಭಿನಂದಿಸಲು ಅಮಿತ್ ಶಾ ಕರೆದಿದ್ದರು. ಅದಕ್ಕಾಗಿ ಹೋಗಿದ್ದರು ಎಂದು ಹೇಳಲಾಗುತ್ತಿದೆ. ಹಾಗೇನಾದರೂ ಆಗಿದ್ದರೆ ಇಡೀ ಚಿತ್ರ ತಂಡವನ್ನು ಕರೆಸಬೇಕಾಗಿತ್ತು ಅನ್ನೋ ಮಾತುಗಳು ಕೇಳಿಬರುತ್ತಿವೆ.

ಇನ್ನು ಈ ಭೇಟಿ ಬಗ್ಗೆ ಅಮಿತ್‌ ಟ್ವೀಟ್‌ ಮಾಡಿದ್ದು, ಅದನ್ನು ರಾಮ್‌ ಚರಣ್‌ ರೀ ಟ್ವೀಟ್‌ ಮಾಡಿದ್ದಾರೆ.

Share Post