BengaluruPolitics

ನೂತನ ಸ್ಪೀಕರ್‌ ಆಗಿ ಯು.ಟಿ.ಖಾದರ್‌ ಅಯ್ಕೆ; ಸಿಎಂ ಸಿದ್ದರಾಮಯ್ಯ ಅಭಿನಂದನೆ

ಬೆಂಗಳೂರು;  ನೂತನ ವಿಧಾನಸಭಾ ಸ್ಪೀಕರ್‌ ಆಗಿ ಹಿರಿಯ ಶಾಸಕ ಯು.ಟಿ.ಖಾದರ್‌ ಆಯ್ಕೆಯಗಿದ್ದಾರೆ. ಇಂದಿನ ಕಲಾಪದಲ್ಲಿ ಸಿಎಂ ಸಿದ್ದರಾಮಯ್ಯ ಯು.ಟಿ.ಖಾದರ್‌ ಹೆಸರು ಪ್ರಸ್ತಾಪ ಮಾಡಿದ್ದು, ಡಿಸಿಎಂ ಡಿ.ಕೆ.ಶಿವಕುಮಾರ್‌ ಅನುಮೋದಿಸಿದ್ದಾರೆ. ಈ ಮೂಲಕ ಸ್ಪೀಕರ್‌ ಆಯ್ಕೆ ಸರ್ವಾನುಮತದಿಂದ ನಡೆದಿದೆ.

ಇದೇ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಯು.ಟಿ.ಖಾದರ್​ಗೆ ಅಭಿನಂದನೆ ಸಲ್ಲಿಸಿದ್ದಾರೆ.  ಅತಿ ಹೆಚ್ಚು ಪ್ರಶ್ನೆ ಕೇಳಿದ ಕಾರಣಕ್ಕಾಗಿ ಯು.ಟಿ.ಖಾದರ್‌ ಅವರಿಗೆ ಸದನವೀರ ಪ್ರಶಸ್ತಿ ಸಿಕ್ಕಿತ್ತು. ವಿಪಕ್ಷ ಉಪನಾಯಕರಾಗಿ ಖಾದರ್‌ ಅವರು ಒಳ್ಳೆಯ ಕೆಲಸ ಮಾಡಿದ್ದಾರೆ. ಸ್ಪೀಕರ್‌ ಹುದ್ದೆಯನ್ನೂ ಸೂಕ್ತವಾಗಿ ನಿರ್ವಹಿಸುತ್ತಾರೆ ಎಂಬ ನಂಬಿಕೆ ಇದೆ ಎಂದು ಹೇಳಿದ್ದಾರೆ.

Share Post