Bengaluru

ಬೆಂಗಳೂರು ನಗರದ ಹಲವೆಡೆ ಇಂದು, ನಾಳೆ ವಿದ್ಯುತ್‌ ವ್ಯತ್ಯಯ

ಬೆಂಗಳೂರು: ನಗರದಲ್ಲಿ ಸಮಸ್ಯೆಗಳಿಲ್ಲದ ದಿನವೇ ಇಲ್ಲ. ಪ್ರತಿದಿನ ಯಾವುದಾದರೂ ಒಂದು ಸಮಸ್ಯೆ ಬೆಂಗಳೂರಿನಲ್ಲಿ ತಲೆದೋರುತ್ತಲೆ ಇರುತ್ತದೆ. ಮೂಲ ಸೌಕರ್ಯಗಳ ಕೊರತೆ ಅಂತೂ ಹೇಳುವ ಹಾಗಿಲ್ಲ. ಒಂದಲ್ಲಾ ಒಂದು ಏರಿಯಾದಲ್ಲಿ ಶುರುವಾಗಿರುತ್ತದೆ. ಅದರಲ್ಲೂ ನೀರು ಮತ್ತು ವಿದ್ಯುತ್‌ ಕಡಿತ ಹೇಳುವ ಹಾಗಿಲ್ಲ. ಏನಾದರೂ ಕಾರಣ ನೀಡಿ ಅಥವಾ ಯಾವುದೂ ಕಾಮಗಾರಿ ಹೆಸರಲ್ಲಿ ವಿದ್ಯುತ್‌ ಕಡಿತ ಸರ್ವೆ ಸಾಮಾನ್ಯವಾಗಿದೆ.

ಅದರಂತೆ ಇಂದು ಮತ್ತು ನಾಳೆ ಕೂಡ ನಗರದ ಹಲವೆಡೆ ವಿದ್ಯುತ್‌ ಕಡಿತವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಇಂದು ಮತ್ತು ನಾಳೆ ಬೆಳಗ್ಗೆ 10  ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್‌ ಸಮಸ್ಯೆ ಇರಲಿದೆ. ಯಾವ್ಯಾವ ಬಡಾವಣೆ, ಏರಿಯಾಗಳಲ್ಲಿ ವಿದ್ಯುತ್‌ ಕಡಿತಗೊಳ್ಳಲಿದೆ ಎಂಬುದರ ಲಿಸ್ಟ್‌ ಕೂಡ ಬಿಡುಗಡೆ ಮಾಡಿದೆ.

ಶಾಂತಿನಗರ, ಬಿಕಾಸಿಪುರ, ಇಸ್ರೋ ಲೇಔಟ್, ಸಿದ್ದಾಪುರ, ಸಾರಕ್ಕಿ ಮಾರುಕಟ್ಟೆ, ಬನಶಂಕರಿ 2ನೇ ಹಂತ, ಸಿದ್ದಣ್ಣ ಲೇಔಟ್, ಕಿಮ್ಸ್ ಕಾಲೇಜು ರಸ್ತೆ, ಹನುಮಗಿರಿ ಲೇಔಟ್, ವಿನಾಯಕ ಲೇಔಟ್, ತುಳಸಿ ಥಿಯೇಟರ್ ರಸ್ತೆ, ಗಾಂಧಿನಗರ ರಸ್ತೆ, ಕಾಳೇನ ಅಗ್ರಹಾರ, ಜೆಪಿ ನಗರ1 ರಿಂದ 5 ಹಂತಗಳು.

ದಕ್ಷಿಣ ವಲಯದ ಚಿಕ್ಕಲಸಂದ್ರ, ಮಾರತ್ತಹಳ್ಳಿ, ಕಾವೇರಿ ಲೇಔಟ್, ಸ್ಪೈಸ್ ಗಾರ್ಡನ್, ಹೊರ ವರ್ತುಲ ರಸ್ತೆ, ಎಚ್‌ಎಸ್‌ಆರ್ ಲೇಔಟ್‌ನ 8 ಮತ್ತು 9ನೇ ಹಂತ ಮತ್ತು ಬೆಳ್ಳಂದೂರು ಮೇಲ್ಸೇತುವೆ ಸರ್ಜಾಪುರ ರಸ್ತೆಯವರೆಗೆ.

ಪೂರ್ವ ವಲಯದ ಸುದ್ದಗುಂಟೆ ಪಾಳ್ಯ, ಕೆ.ಜಿ.ಪುರ ಮುಖ್ಯರಸ್ತೆ, ಥಣಿಸಂದ್ರ ಮುಖ್ಯರಸ್ತೆ ಮತ್ತು ಗಾಯತ್ರಿ ಲೇಔಟ್‌ನಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಉತ್ತರ ವಲಯದಲ್ಲಿ ನ್ಯೂ ಬಿಇಎಲ್ ರಸ್ತೆ, ಮತ್ತಿಕೆರೆ ಮುಖ್ಯರಸ್ತೆ, ಹೆಸರಘಟ್ಟ ಮುಖ್ಯರಸ್ತೆ, ಕೆಎಚ್‌ಬಿ ಕಾಲೋನಿ, ಜಕ್ಕೂರು ಮುಖ್ಯರಸ್ತೆ, ಆರ್‌ಟಿ ನಗರ ಮತ್ತು ನೃಪತುಂಗ ರಸ್ತೆ, ನಾರಾಯಣಪುರ ಮತ್ತು ಶೋಭಾ ಕ್ರಿಸಾಂಥೆಮಮ್ ಅಪಾರ್ಟ್‌ ಮೆಂಟ್‌ ನಲ್ಲಿ ಸಂಚಾರ ಸ್ಥಗಿತಗೊಳ್ಳಲಿದೆ.

ಪಶ್ಚಿಮ ವಲಯದಲ್ಲಿ ಚಾಮುಂಡಿ ನಗರ, ಗಾಂಧಿಬಜಾರ್‌, ಬಿಎಚ್‌ಇಎಲ್‌ ಲೇಔಟ್‌, ವಿದ್ಯಾಪೀಠ ರಸ್ತೆ, ಹೊಸಹಳ್ಳಿ ರಸ್ತೆ, ಬಿಡಿಎ ಕಾಲೋನಿ ಸೇರಿದಂತೆ ವಿವಿಧ ಪ್ರದೇಶಗಳಿಗೆ ತೊಂದರೆಯಾಗಲಿದೆ.

ಜನವರಿ 26 ರಂದು ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು

ಇಸ್ರೋ ಲೇಔಟ್, 24 ನೇ ಮುಖ್ಯ ಜೆಪಿ ನಗರ, ಲಕ್ಷ್ಮಿ ರಸ್ತೆ ಕುಮಾರಸ್ವಾಮಿ ಲೇಔಟ್ ಮತ್ತು ದೊಡ್ಡಕಮ್ಮನಹಳ್ಳಿ ಸೇರಿವೆ. ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ಕಡಿತವಾಗಲಿದ

ಉತ್ತರ ವಲಯದ ಸುಂದರ್ ನಗರ, ಬಿಇಎಲ್ ಇಂಡಸ್ಟ್ರಿಯಲ್ ಎಸ್ಟೇಟ್, ಬಾಗಲೂರು ಮುಖ್ಯರಸ್ತೆ, ಮಾರುತಿ ನಗರ, ದ್ವಾರಕಾ ನಗರ ಮತ್ತು ವಿವೇಕ್ ಮಾರ್ವೆಲ್ಸ್ ಅಪಾರ್ಟ್‌ ಮೆಂಟ್ ಸೇರಿದಂತೆ ಆಯಾ ನಿಲ್ದಾಣಗಳಲ್ಲಿ ನಿರ್ವಹಣಾ ಕಾಮಗಾರಿಯಿಂದ ತೊಂದರೆಯಾಗಲಿದೆ. ಇಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ಕಡಿತಗೊಳ್ಳುವ ನಿರೀಕ್ಷೆಯಿದೆ.

ವಿದ್ಯುತ್‌ ಕಡಿತದಿಂದಾಗಿ ವರ್ಕ್‌ ಫ್ರಂ ಹೋಂನಲ್ಲಿರುವ ಖಾಸಗಿ ಕಂಪನಿಯ ಉದ್ಯೋಗಿಗಳು ಪರದಾಡುವ ಸ್ಥಿತಿ ಉಂಟಾಗಿದೆ. ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳದಿದ್ದರೆ. ಇಂದು ನಾಳಿನ ಕೆಲಸಗಳು ಹರೋಹರ…ಎನ್ನುವ ಸ್ಥಿತಿಗೆ ಬೆಸ್ಕಾಂ ತಂದಿಳಿಸಿದೆ.

Share Post