Bengaluru

ಬಿಜೆಪಿಯನ್ನು ಅಭಿನಂದಿಸಿದ ಕಾಂಗ್ರೆಸ್‌ ನಾಯಕ ದಿನೇಶ್‌ ಗುಂಡೂರಾವ್‌ ಪತ್ನಿ..!

ಬೆಂಗಳೂರು: ಬಿಜೆಪಿ ಮತ್ತೊಮ್ಮೆ ಎಲ್ಲವನ್ನು ಧೂಳಿಪಟ ಮಾಡಿದೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಪತ್ನಿ ಟಬು ಗುಂಡೂರಾವ್ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ವ್ಯವಸ್ಥೆ ಬದಲಾಗದ ಹೊರತು ಏನು ಮಾಡಲು ಆಗುವುದಿಲ್ಲ ಎಂದಿದ್ದಾರೆ.

ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದ ಹಿನ್ನೆಲೆಯಲ್ಲಿ ಟಬು ಗುಂಡೂರಾವ್‌ ಮಾಡಿರುವ ಟ್ವೀಟ್‌ನ ವಿವರ ಹೀಗಿದೆ.

‘ಬಿಜೆಪಿ ಮತ್ತೊಮ್ಮೆ ಎಲ್ಲವನ್ನು ಧೂಳಿಪಟ ಮಾಡಿದೆ. ‘ಆಮ್‌ ಆದ್ಮಿ ಪಕ್ಷʼ ಅಸಾಧಾರಣ ಗೆಲುವು ಸಾಧಿಸಿದ್ದು, ನಿಜಕ್ಕೂ ಅರವಿಂದ ಕೇಜ್ರಿವಾಲ್‌ ಅವರು ಸಮರ್ಥ ನಾಯಕರಾಗಿ ಹೊರಹೊಮ್ಮಿದ್ದಾರೆ. ವ್ಯವಸ್ಥೆ ಬದಲಾಗದೇ ಜನರೂ ಎಷ್ಟೇ ಕಷ್ಟ ಪಟ್ಟರೂ ಯಾವುದೇ ಪ್ರಯೋಜನವಿಲ್ಲ. ವ್ಯವಸ್ಥೆ ಬದಲಾಗದ ಹೊರತು ಏನನ್ನು ಮಾಡಲಾಗುವುದಿಲ್ಲ’
ಈಗಂತ ಟಬು ಗುಂಡೂರಾವ್‌ ಟ್ವೀಟ್‌ ಮಾಡಿದ್ದಾರೆ.

ಟಬು ಗುಂಡೂರಾವ್‌ ಅವರು ವ್ಯವಸ್ಥೆ ಬದಲಾಗಬೇಕು ಎಂದು ಯಾರಿಗೆ ಹೇಳಿದ್ದಾರೆ ಎಂಬುದರ ಬಗ್ಗೆ ರಾಜ್ಯ ರಾಜಕೀಯದಲ್ಲಿ ಚರ್ಚೆಗಳು ಶುರುವಾಗಿವೆ.

Share Post