Bengaluru

ಕಾಂಗ್ರೆಸ್‌ ಪಾದಯಾತ್ರೆ ವಿರುದ್ಧ ಸಚಿವ ಸುಧಾಕರ್‌ ಟಾಂಗ್‌

ಬೆಂಗಳೂರು: ಜನವರಿ ಒಂಭತ್ತರಂದು ಮೇಕೆದಾಟು ಯೋಜನೆ ವಿಚಾರವಾಗಿ ಪಾದಯಾತ್ರೆ ಮಾಡೇ ಮಾಡ್ತೇವೆ ಎಂಬ ಕಾಂಗ್ರೆಸ್‌ ನಾಯಕರ ಮಾತಿಗೆ ಸಚಿವ ಸುಧಾಕರ್‌ ಟಾಂಗ್‌ ಕೊಟ್ಟಿದ್ದಾರೆ. ಕಾಂಗ್ರೆಸ್‌ ನಾಯಕರಿಗೆ ಜನರ ಹಿತ ಮುಖ್ಯ ಅಂದುಕೊಂಡ್ರೆ ಪಾದಯಾತ್ರೆ ಕೈ ಬಿಡುತ್ತಾರೆ. ಅವರಿಗೂ ಜನಪರ ಕಾಳಜಿ ಇದೆ ಅಂತ ತಿಳಿದಿದ್ದೇನೆ. ಯಾಕಂದ್ರೆ ಕಾಂಗ್ರೆಸ್‌ ಪಕ್ಷ ಕೂಡ ರಾಜ್ಯದಲ್ಲಿ ಆಡಳಿತ ನಡೆಸಿದೆ. ಪಕ್ಷದಲ್ಲಿರುವವರು ಸಿಎಂ ಆಗಿ, ಜವಾಬ್ದಾರಿಯುತ ಖಾತೆಗಳನ್ನು ನಿರ್ವಹಿಸಿದವರೂ ಇದಾರೆ. ಹಾಗಾಗಿ ಒಳ್ಳೆಯದು, ಕೆಟ್ಟದರ ಬಗ್ಗೆ ಅವರಿಗೂ ಮಾಹಿತಿಯಿರುತ್ತದೆ. ಒಂದು ವೇಳೆ ಸರ್ಕಾರದ ನಿಯಮ ಮೀರಿದ್ರೆ ಕಾನೂನು ತನ್ನ ಕೆಲಸವನ್ನು ಅದು ಮಾಡುತ್ತದೆ ಎಂದು ಪರೋಕ್ಷವಾಗಿ ಟಾಂಗ್‌ ನೀಡಿದ್ದಾರೆ.

Share Post