BengaluruCinema

ಬಿಗ್‌ಬಾಸ್‌ ತೊರೆಯಲು ಸುದೀಪ್‌ ನಿರ್ಧಾರ!; ಕಿಚ್ಚ ಹೇಳಿದ್ದೇನು..?

ಬೆಂಗಳೂರು; ಕನ್ನಡದ ಬಿಗ್‌ಬಾಸ್‌ ಕಾರ್ಯಕ್ರಮದ ನಿರೂಪಣೆಯಿಂದ ನಟ ಕಿಚ್ಚ ಸುದೀಪ್‌ ಹಿಂದೆ ಸರಿಯುತ್ತಿದ್ದಾರೆ.. ಅವರೇ ಅಧಿಕೃತವಾಗಿ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.. 11 ಬಿಗ್‌ಬಾಸ್‌ ಸೀಸನ್‌ಗಳನ್ನು ನಡೆಸಿಕೊಟ್ಟಿರುವ ಸುದೀಪ್‌ ಅವರ ಈ ದಿಢೀರ್‌ ನಿರ್ಧಾರ ಎಲ್ಲರಿಗೂ ಅಚ್ಚರಿ ತರಿಸಿದೆ..
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು ಈ ಸೀಸನ್‌ ಮುಗಿದ ಮೇಲೆ ಬಿಗ್‌ಬಾಸ್‌ಗೆ ವಿದಾಯ ಹೇಳುತ್ತಿರುವುದಾಗಿ ಹೇಳಿಕೊಂಡಿದ್ದಾರೆ.. ನಾನು ನಿರೂಪಣೆ ಮಾಡಿರುವ ಇದೇ ಕೊನೆ ಬಿಗ್‌ ಬಾಸ್‌ ಶೋ ಎಂದು ಅವರು ಹೇಳಿಕೊಂಡಿದ್ದಾರೆ.. ಮುಂದಿನ ಸೀಸನ್‌ನಿಂದ ನಾನು ಬಿಗ್‌ ಬಾಸ್‌ ಶೋ ನಿರೂಪಣೆ ಮಾಡೋದಿಲ್ಲ.. ಕಳೆದ 11 ಸೀಸನ್‌ಗಳಿಂದ ಬಿಗ್‌ ಬಾಸ್‌ ಶೋಗೆ ಉತ್ತಮ ಸ್ಪಂದನೆ ನೀಡಿ, ಉತ್ತಮ ಟಿಆರ್‌ಪಿ ಬರುವಂತೆ ಮಾಡಿದ ನಿಮಗೆ ಧನ್ಯವಾದಗಳು.. ನಾನು ಈಗ ಬೇರೆ ಕಡೆ ಗಮನ ಹರಿಸುವ ಸಮಯ ಬಂದಿದೆ..
ಇದು ನನ್ನ ಕೊನೆಯ ಬಿಗ್‌ ಬಾಸ್‌ ಶೋ ಆಗಿದ್ದು, ಈ ಹಿಂದಿನಂತೆ ಕಾರ್ಯಕ್ರಮವನ್ನು ನೋಡಿ ಪ್ರೋತ್ಸಾಹಿಸುತ್ತೀರಿ ಎಂದು ನಂಬುತ್ತೇನೆ.. ಜೊತೆ ನೀವು ಹಾಗೂ ಕಲರ್ಸ್‌ ನವರು ನನ್ನ ನಿರ್ಧಾರಕ್ಕೆ ಗೌರವ ಕೊಡುತ್ತೀರೆಂದು ನಂಬುತ್ತೇನೆ ಎಂದು ಸುದೀಪ್‌ ಹೇಳಿಕೊಂಡಿದ್ದಾರೆ.. ಈಗ ನಡೆಯುತ್ತಿರುವ ಶೋಗೇ ಸುದೀಪ್‌ ಇರೋದಿಲ್ಲ ಎಂದು ಹೇಳಲಾಗುತ್ತಿತ್ತು.. ಬೇರೆ ಹೋಸ್ಟ್‌ ಹುಡುಕಲಾಗುತ್ತಿತ್ತು.. ಕೊನೆಗೆ ಸುದೀಪ್‌ ಮನವೊಲಿಸಿ ಈ ಸೀಸನ್‌ಗೆ ಒಪ್ಪಿಸಲಾಗಿತ್ತು.. ಸೀಸನ್‌ ಮುಗಿದ ಮೇಲೆ ಸುದೀಪ್‌ ಈ ನಿರ್ಧಾರ ಪ್ರಕಟಿಸಬಹುದುತ್ತೇನೋ.. ಆದ್ರೆ ದಿಢೀರ್‌ ಅಂತ ಈಗಲೇ ಅವರ ನಿರ್ಧಾರ ಪ್ರಕಟಿಸಿರುವ ಚರ್ಚೆಗೆ ಕಾರಣವಾಗಿದೆ..

Share Post