Bengaluru

ಸಿದ್ದರಾಮಯ್ಯ ಎರಡು ತಲೆಯ ಹಾವಿದ್ದಂತೆ; ಸಚಿವ ಶ್ರೀರಾಮುಲು

ಬೆಂಗಳೂರು; ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡು ತಲೆಯ ಹಾವಿದ್ದಂತೆ ಎಂದು ಸಚಿವ ಬಿ.ಶ್ರೀರಾಮುಲು ಲೇವಡಿ ಮಾಡಿದ್ದಾರೆ. ಬಿಜೆಪಿ ಮುಖಂಡರನ್ನು ಸಿದ್ದರಾಮಯ್ಯ ಸೀಳು ನಾಯಿಗಳಿಗೆ ಹೋಲಿಸಿರುವುದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಸಿದ್ದರಾಮಯ್ಯ ಅವರಿಗೇ ಸೀಳು ನಾಲಿಗೆ ಇದೆ. ಹೀಗಾಗಿಯೇ ಬೆಳಗ್ಗೆ ಒಂದು ಸಂಜೆ ಒಂದು ಮಾತನಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ ಅವರು ಸಿಎಂ ಆಗಿದ್ದವರು. ಅವರು ಅವರ ಘಟನೆತೆಗೆ ತಕ್ಕಂತೆ ಮಾತನಾಡಿಬೇಕು. ಅವರು ಹಾಗೆ ಮಾತನಾಡುತ್ತಿಲ್ಲ. ಹೀಗಾಗಿ ಅವರ ಪಕ್ಷದಲ್ಲೇ ಅವರ ಮಾತಿಗೆ ಕಿಮ್ಮತ್ತು ಸಿಗುತ್ತಿಲ್ಲ ಎಂದು ಶ್ರೀರಾಮುಲು ಲೇವಡಿ ಮಾಡಿದ್ದಾರೆ.

Share Post